ಮುಂಬೈ: ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಮಾಫಿಯಾ, ಡ್ರಗ್ಸ್ ಮಾಫಿಯಾ ಬಗ್ಗೆ ಕಂಗನಾ ಬೋಲ್ಡ್ ಆಗಿ ಮಾತನಾಡುತ್ತಿದ್ದಾರೆ.
ಮುಂಬೈನಲ್ಲಿದ್ದ ಕಂಗನಾ ಕಚೇರಿಯನ್ನು ಅಕ್ರಮ ಕಟ್ಟಡ ಎಂದು ಹೇಳಿ ಶಿವಸೇನೆ ಸರ್ಕಾರ ನೆಲಸಮ ಮಾಡಿದೆ. ಈ ವಿಚಾರವಾಗಿ ನೇರವಾಗಿಯೇ ಉದ್ಧವ್ ಠಾಕ್ರೆಯವರಿಗೆ ಸವಾಲು ಹಾಕಿರುವ ಕಂಗನಾ, ಇದೀಗ ಹಿಮಾಚಲ ಪ್ರದೇಶಕ್ಕೆ ವಾಪಸ್ ತೆರಳಿದ್ದಾರೆ.
ಮುಂಬೈ ಬಿಟ್ಟ ಕೆಲವೇ ಕ್ಷಣದಲ್ಲಿ ಟ್ವೀಟ್ ಮೂಲಕ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ಹತ್ತಿಕ್ಕಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ. ನಾನು ಬಾಲಿವುಡ್ ಮಾಫಿಯಾ, ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ದಂಧೆ ಬಗ್ಗೆ ತುಂಬ ವಿಚಾರಗಳನ್ನು ಮಾತನಾಡುತ್ತಿರುವುದೇ ಅವರಿಗೆ ಸಮಸ್ಯೆ. ಯಾಕೆಂದರೆ ಈ ಎಲ್ಲದರ ಜತೆ ಉದ್ಧವ್ ಪ್ರೀತಿಯ ಪುತ್ರ ಆದಿತ್ಯ ಠಾಕ್ರೆಗೆ ಸಂಪರ್ಕವಿದೆ. ಕೆಟ್ಟದ್ದನ್ನು ಎತ್ತಿ ಆಡಿದ್ದೇ ನನ್ನ ಅಪರಾಧವಾಗಿದ್ದರಿಂದ, ಅವರೆಲ್ಲ ಸೇರಿ ನನ್ನನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಡಕ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 15 ದಿನ ಶಿರಾದಲ್ಲೇ ಮೊಕ್ಕಾಂ ಹೂಡಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ
ಬಾಂದ್ರಾದಲ್ಲಿರುವ ತಮ್ಮ ಕಚೇರಿ ನೆಲಸಮ ಆಗಿದ್ದನ್ನು ನೋಡಿದ ಕಂಗನಾ ಮುಂಬೈನಿಂದ ಭಾರವಾದ ಹೃದಯದೊಂದಿಗೆ ವಾಪಸ್ ಹೋಗುತ್ತಿರುವುದಾಗಿ ಹೇಳಿದ್ದರು. ಮುಂಬೈ ಪಿಒಕೆ ಅಂತೆ ಭಾಸವಾಗುತ್ತಿದ್ದೆ ಎಂಬ ನನ್ನ ಮಾತು ಸತ್ಯವಾಯಿತು ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್)
ಸುಶಾಂತ್ ಫಾರ್ಮ್ಹೌಸ್ನಲ್ಲಿ ಏನೆಲ್ಲಾ ಸಿಗ್ತು? ಇಲ್ಲಿದೆ ಡೀಟೇಲ್ಸ್ …