ಹೈದರಾಬಾದ್: ಪ್ರಭಾಸ್ ಅಭಿನಯದ ಅತಿನಿರೀಕ್ಷಿತ ಚಿತ್ರದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ಪ್ರಾರಂಭವಾಗಿದ್ದು, ಒಂದಿಷ್ಟು ಭಾಗದ ಚಿತ್ರೀಕರಣ ಸಹ ಆಗಿದೆ. ಈ ಮಧ್ಯೆ, ಚಿತ್ರತಂಡದವರು ಚಿತ್ರೀಕರಣವನ್ನು ಹೈದರಾಬಾದ್ಗೆ ಶಿಫ್ಟ್ ಮಾಡುವುದಕ್ಕೆ ಯೋಚಿಸುತ್ತಿದ್ದಾರಂತೆ.
ಇದನ್ನೂ ಓದಿ: ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ
ಹೌದು, ಆದಿಪುರುಷ್ ನಿರ್ದೇಶಕ ಓಂ ರೌತ್, ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್ಗೆ ಸ್ಥಳಾಂತರಿಸುವುದಕ್ಕೆ ಯೋಚಿಸುತ್ತಿದ್ದಾರಂತೆ. ಅದಕ್ಕೆ ಕಾರಣ, ಮುಂಬೈನಲ್ಲಿ ಕರೊನಾ ಎರಡನೆ ಅಲೆ ಜೋರಾಗಿದ್ದು, ಚಿತ್ರೀಕರಣ ಚಟುವಟಿಕೆಗಳನ್ನೆಲ್ಲ ನಿಲ್ಲಿಸಲಾ್ಗಿದೆ. ಆದರೆ, ಹೈದರಾಬಾದ್ನಲ್ಲಿ ಆ ಪರಿಸ್ಥಿತಿ ಏನಿಲ್ಲ. ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರವು ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ಗೆ ಯಾಕೆ ಹೋಗಬಾರದು ಎಂಬುದು ಚಿತ್ರತಂಡದ ಯೋಚನೆ.
ಒಂದು ಪಕ್ಷ, ಚಿತ್ರತಂಡದವರೆಲ್ಲರೂ ಒಪ್ಪಿಕೊಂಡ ಪಕ್ಷದಲ್ಲಿ ಚಿತ್ರತಂಡದವರೆಲ್ಲ ಒಪ್ಪಿಕೊಂಡ ಪಕ್ಷದಲ್ಲಿ, ಹೈದರಾಬಾದ್ನ ರಾಮೋಜಿ ಫಿಲ್ಮ್ಸಿಟಿಯಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಹೇಗೂ ಚಿತ್ರದಲ್ಲಿ ಗ್ರಾಫಿಕ್ಸ್ ಭಾಗದ ಚಿತ್ರೀಕರಣ ಹೆಚ್ಚಾಗಿದ್ದು, ಗ್ರೀನ್ಮ್ಯಾಟ್ನಲ್ಲೇ ಚಿತ್ರೀಕರಣ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ನ ಸ್ಟುಡಿಯೋಗಳಲ್ಲಿ ಬಹಳ ಸುರಕ್ಷಿತವಾಗಿ ಚಿತ್ರೀಕರಣ ಮಾಡುವ ಸಾಧ್ಯತೆ ಇರುವುದರಿಂದ, ಚಿತ್ರತಂಡದವರು ಸದ್ಯದಲ್ಲೇ ಹೈದರಾಬಾದ್ನತ್ತ ಪ್ರಯಾಣ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಿದ್ಧಾರ್ಥ್ಗೆ ಸಿಕ್ಕಿದೆ ಹೊಸ ಬಿರುದು … ಏನು ಗೊತ್ತಾ ಅದು?
ಈ ಮಧ್ಯೆ, ವಿಭೀಷಣನ ಪಾತ್ರ ಮಾಡುವುದಕ್ಕೆ ಚಿತ್ರತಂಡದವರು ಸುದೀಪ್ ಅವರನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸುದೀಪ್ ಕಡೆಯಿಂದಾಗಲೀ, ಚಿತ್ರತಂಡದವರ ಕಡೆಯಿಂದಾಗಲೀ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ಘೋಷಣೆ ಹೊರಬಿದ್ದಿಲ್ಲ.
ಕನ್ನಡದ ಮತ್ತೊಬ್ಬ ಹಿರಿಯ ನಟ ಕರೊನಾಗೆ ಬಲಿ: ಶಂಖನಾದ ಅರವಿಂದ್ ಇನ್ನಿಲ್ಲ