ನೆಲಮಂಗಲ: ನನ್ನ ಸಾವಿಗೆ ಪೊಲೀಸರೇ ಕಾರಣ. ಅವರ ಕಿರುಕುಳ ಸಹಿಸಲಾಗ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಲೇ ಯುವಕನೊಬ್ಬ ಪೇಸ್ಬುಕ್ ಲೈವ್ನಲ್ಲಿ ಇಲಿ ಪಾಷಾಣ ಕುಡಿದಿದ್ದು, ಈ ದೃಶ್ಯ ವೈರಲ್ ಆಗಿದೆ.
ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಚಕ್ಕಸಂದ್ರದಲ್ಲಿ ಬುಧವಾರ ಸಂಭವಿಸಿದೆ. ಚಕ್ಕಸಂದ್ರದ ನಿವಾಸಿ ಅಮಿತ್ ಎಂಬಾತ ಫೇಸ್ಬುಕ್ ಲೈವ್ನಲ್ಲಿ ‘ನನ್ನ ಸಾವಿಗೆ ನೆಲಮಂಗಲ ಠಾಣೆ ಪೊಲೀಸರೇ ಕಾರಣ. ನನಗೆ ಯಾರ ಕೊಲೆ ವಿಚಾರವೂ ತಿಳಿದಿಲ್ಲ. ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಎ.ವಿ. ಕುಮಾರ್, ಮುಖ್ಯಪೇದೆ ಬಸವರಾಜು, ಕೇಶವ್, ಗಂಗಣ್ಣ ಎಂಬುವವರು ನನ್ನ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ, ನನ್ನ ಸಾವಿಗೆ ನೆಲಮಂಗಲ ಪೊಲೀಸರೇ ಕಾರಣ, ಇದನ್ನು ಪೊಲೀಸರಿಗೆ ತಲುಪಿಸಿ ನನ್ನ ಸಾವಿನ ನಂತರ ನನಗೆ ನ್ಯಾಯಕೊಡಿಸಿ’ ಎಂದು ವಿಡಿಯೋದಲ್ಲಿ ಮಾತನಾಡಿದ್ದಾನೆ.
ಇತ್ತೀಚೆಗೆ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಅಮಿತ್ ಮನೆಯಲ್ಲಿ ಆಶ್ರಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಮಿತ್ ಪಾಲಕರನ್ನು ತನಿಖೆಗೆ ಒಳಪಡಿಸಿದ್ದರು. ಇದರಿಂದ ಹೆದರಿದ ಅಮಿತ್ ತಲೆಮರೆಸಿಕೊಂಡಿದ್ದ. ಸೆ.22 ರಂದು ಫೇಸ್ಬುಕ್ ಲೈನ್ನಲ್ಲಿ ಬಂದು ‘ಕೊಲೆ ವಿಚಾರ ನನಗೆ ತಿಳಿದಿಲ್ಲ. ಪೊಲೀಸರು ಸುಮ್ಮನೆ ನಮಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿ ಇಲಿ ಪಾಷಣ ಕುಡಿದಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಮಿತ್ಗಾಗಿ ಹುಡುಕಾಟ ನಡೆಸಿದ್ದು, ಅಮಿತ್ ನಾಪತ್ತೆಯಾಗಿದ್ದಾನೆ.
ವಿದ್ಯಾರ್ಥಿಯ ತಾಯಿಯನ್ನ ಪೀಡಿಸಿ ತರಗತಿಯಲ್ಲೇ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕ!
ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್
ನನ್ನ ತಂದೆಗೆ ಹಲವು ಕಾಲ್ಗರ್ಲ್ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್ ಮಾಡ್ತಿದ್ದ…