More

    ಚಿಕ್ಕಪ್ಪನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆಗೈದ ಯುವಕ

    ನಂಜನಗೂಡು: ತಾಲೂಕಿನ ಮರಳ್ಳಿಪುರ ಗ್ರಾಮದಲ್ಲಿ ಜಮೀನಿನ ರಸ್ತೆ ವಿಚಾರವಾಗಿ ದಯಾದಿಗಳ ನಡುವೆ ಜಗಳ ಶುರುವಾಗಿ ಸಹೋದರನ ಪುತ್ರ ಚಿಕ್ಕಪ್ಪನನ್ನೇ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಗ್ರಾಮದ ಪರಶಿವಪ್ಪ (65) ಕೊಲೆಯಾದವರು. ಇವರ ಸಹೋದರ ಪ್ರಭುಸ್ವಾಮಿ ಅವರ ಪುತ್ರ ಆದೀಶ್ ಕೊಲೆ ಮಾಡಿದ ಆರೋಪಿ.
    ಸಹೋದರರಾದ ಮೃತ ಪರಶಿವಪ್ಪ ಹಾಗೂ ಪ್ರಭುಸ್ವಾಮಿ ನಡುವೆ ಜಮೀನಿನ ನಡುವೆ ರಸ್ತೆ ವಿಚಾರವಾಗಿ ಬುಧವಾರ ಸಂಜೆ ಜಮೀನಿನಲ್ಲಿ ಜಗಳ ಶುರುವಾಗಿದೆ ಎನ್ನಲಾಗಿದೆ. ಈ ವೇಳೆ ಪ್ರಭುಸ್ವಾಮಿ ಪುತ್ರ ಆದೀಶ್ ಎಂಬಾತನು ಪರಶಿವಪ್ಪ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ಪರಶಿವಪ್ಪ ನಿತ್ರಾಣಗೊಂಡು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

    ಬಳಿಕ ಆರೋಪಿ ಆದೀಶ್ ಹಾಗೂ ಪ್ರಭುಸ್ವಾಮಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಪರಶಿವಪ್ಪ ಪತ್ನಿ ಮಹದೇವಮ್ಮ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್‌ಐ ಕೃಷ್ಣಕಾಂತ ಕೋಳಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts