More

    ಪ್ರಿಯಕರನ ಜತೆ ಸೇರಿ ಪತಿಯನ್ನು ಸುಟ್ಟು ಕೊಂದ ಪತ್ನಿ: ಆರೋಪಿಗಳಿಬ್ಬರ ಬಂಧನ

    ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

    ಪತ್ನಿ ಮೆಹರ್​ ಹಾಗೂ ಪ್ರಿಯಕರ ತೌಸೀಫ್​ ಬಂಧಿತ ಆರೋಪಿಗಳು. ದಾದಾಪೀರ್ ಎಂಬಾತ ಕೊಲೆಯಾದ ಪತಿ. ಆರೋಪಿಗಳನ್ನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ. ಮೆಹರ್ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಲ್ಲದೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಳು.

    2021ರ ನ. 26ರಂದು ಗಂಜಿಕುಂಟೆ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಪತಿಗೆ ಮೊದಲು ನಿದ್ರೆ ಮಾತ್ರೆ ತಿನಿಸಿ ಮಲಗಿಸಲಾಗಿತ್ತು. ಬಳಿಕ ಆತನನ್ನು ಕೊಲೆ ಮಾಡಿ, ನಂತರ ಕೋಳಿ ಸುಡುವ ಗ್ಯಾಸ್​ ಗನ್​ನಿಂದ ಸುಡಲಾಗಿತ್ತು. ಆಮೇಲೆ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಈಕೆ ನಾಟಕವಾಡಿದ್ದಳು.

    ಇದನ್ನೂ ಓದಿ: 2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್​ಎಸ್​ಎಲ್​ ವರದಿ ಆಧಾರದ ಮೇಲೆ ಪತ್ನಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಆರೋಪಿ ತೌಸೀಫ್​ ದಾದಾಪೀರ್​ನ ಸೋದರ ಸಂಬಂಧಿಯಾಗಿದ್ದು, ಆತನೊಂದಿಗೆ ಮೆಹರ್ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು.

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಉರಗ ಉನ್ಮಾದ: ಹಾವುಗಳ ಪ್ರಣಯ ನೋಡಲು ಮುಗಿಬಿದ್ದ ಜನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts