ಕಾರವಾರ: ಕುವೈತ್ನಲ್ಲಿದ್ದ ಉತ್ತರ ಕನ್ನಡ ಮೂಲದ ವ್ಯಕ್ತಿ ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದಾಶಿವಗಡ ಮೂಲದ ಸುಶಾಂತ ಗಜಾನನ ಕಡವಾಡಕರ್ (39) ಮೃತರು.
ಕುವೈತ್ನ ಹೋಟೆಲ್ವೊಂದರಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಸುಶಾಂತಗೆ ಮೇ 24ರಂದು ಜ್ವರ ಕಾಣಿಸಿಕೊಂಡಿತ್ತು. 27ರಂದು ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು.
ಇದನ್ನೂ ಓದಿರಿ ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರಿಸಲು ಸಿಎಂ ಗಡುವು
ಮಂಗಳವಾರ(ಜೂ.2) ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಿಸದೆ ಸುಶಾಂತ ಗಜಾನನ ಮೃತಪಟ್ಟರು. ಕೋವಿಡ್19 ಶಿಷ್ಟಾಚಾರದಂತೆ ಕುವೈತ್ನಲ್ಲೇ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಸದಾಶಿವಗಡಲ್ಲಿರುವ ಮೃತರ ಸಹೋದರ ಸೂರಜ್ ಕಡವಾಡಕರ್ ಮಾಹಿತಿ ನೀಡಿದ್ದಾರೆ.
ಮೃತರಿಗೆ ಪತ್ನಿ, ಒಬ್ಬ ಪುತ್ರಿ, ಇಬ್ಬರು ಪುತ್ರರಿದ್ದು, ಭಟ್ಕಳದಲ್ಲಿ ವಾಸವಿದ್ದಾರೆ. ಇವರಿಗೂ ಸುಶಾಂತರ ಅಂತಿಮ ದರ್ಶನಭಾಗ್ಯ ಸಿಗಲಿಲ್ಲ.
ಇದನ್ನೂ ಓದಿರಿ ಗ್ರಾಪಂ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ವಿರೋಧ.. ಹೋರಾಟದ ಎಚ್ಚರಿಕೆ ಕೊಟ್ಟ ಸಿದ್ದು!