ಕಡೂರು: ಒಬ್ಬಳೇ ಯುವತಿಯನ್ನು ಮದುವೆಯಾದ ಯುವಕರಿಬ್ಬರ ನಡುವಿನ ಜಗಳ ಇದು. ಆಕೆಯ ಮೊದಲ ಗಂಡನನ್ನು ಅಪಹರಿಸಿ ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಪ್ರಕರಣ?: ಚಿಕ್ಕಮಗಳೂರು ಜಿಲ್ಲೆ ಕಡೂರು ಸಿಪಿಸಿ ಕಾಲನಿಯ ದಿನಸಿ ವ್ಯಾಪಾರಿ ಮೋಹನ್ರಾಮ್ ಐದು ವರ್ಷದ ಹಿಂದೆ ರಾಜಸ್ಥಾನದ ಮಂಜುಳಾ ಎಂಬಾಕೆಯನ್ನು ಜೋಧ್ಪುರದಲ್ಲಿಯೇ ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕಡೂರಿಗೆ ಕರೆತಂದಿದ್ದ. ಎರಡು ತಿಂಗಳ ನಂತರ ಮಂಜುಳಾ ತವರಿಗೆ ಹೋಗಿದ್ದಳು. ಕೆಲ ದಿನಗಳ ನಂತರ ಪತ್ನಿಯನ್ನು ಕರೆತರಲು ಮೋಹನ್ ರಾಮ್ ಹೋಗಿದ್ದ. ಆದರೆ ಆಕೆ ಬರಲು ಒಪ್ಪಲಿಲ್ಲ. ಬೇಸತ್ತು ಸುಮ್ಮನಾಗಿದ್ದ.
ಕಳೆದ ತಿಂಗಳು ಮಂಜುಳಾರನ್ನು ಹರಿಯಾಣದ ಓಂಪ್ರಕಾಶ್ ಎಂಬಾತನ ಜತೆ ಮದುವೆ ಮಾಡಿಕೊಟ್ಟಿರುವುದು ಮೋಹನ್ಗೆ ಗೊತ್ತಾಗಿದೆ. ಇತ್ತೀಚೆಗೆ ಮಂಜುಳಾಗೆ ಮೆಸೇಜ್ ಮಾಡಿ ಮದುವೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮೋಹನ್ರಾಮ್ ಯತ್ನಿಸುತ್ತಿದ್ದ. ಇದನ್ನು ಸಹಿಸದ ಓಂಪ್ರಕಾಶ್, ತನ್ನ ಪತ್ನಿಯ ಮೊದಲ ಗಂಡನಿಗೆ ಗತಿ ಕಾಣಿಸಬೇಕು ಎಂದು ಸಂಚು ರೂಪಿಸಿದ್ದ.
ಅದರಂತೆ ತನ್ನ ತಂಡದೊಂದಿಗೆ ಕಾರಿನಲ್ಲಿ ಆ.28ರ ರಾತ್ರಿ ಕಡೂರು ಪಟ್ಟಣಕ್ಕೆ ಬಂದು ಮೋಹನ್ರಾಮ್ನನ್ನು ಅಪಹರಿಸಿ, ಕಾರಿನಲ್ಲಿಯೇ ಕೊಲೆಗೆ ಯತ್ನಿಸಿದ್ದ. ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರನ್ನು ಚೇಸ್ ಮಾಡಿಕೊಂಡು ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಮತಿಘಟ್ಟ ಬಳಿ ಕಾರು ಕೆಟ್ಟುನಿಂತಿತ್ತು. ಅಷ್ಟರಲ್ಲಿ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಆರೋಪಿಗಳಾದ ಓಂಪ್ರಕಾಶ್ ಹಾಗೂ ಆತನ ಸಹಚರರಾದ ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಬಂಧಿತರು.
ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ
ಧರ್ಮಸ್ಥಳದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಭಿನ್ನಕೋಮಿನ ಜೋಡಿಗೆ ಮಾರ್ಗದಲ್ಲೇ ಕಾದಿತ್ತು ಶಾಕ್
ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು