ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಬೆಂಗಳೂರಿನ ವೈಟ್ಫೀಲ್ಡ್ನ ವಿವಂತಾ ಹೋಟೆಲ್ನಲ್ಲಿ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಮತ್ತೊಂದು ಸುತ್ತಿನ ಸಭೆ ಯಶವಂತಪುರದ ತಾಜ್ ವಿವಂತಾ ಹೋಟೆಲ್ಗೆ ಶಿಫ್ಟ್ ಆಗಿದೆ. ಎಲ್ಲರೂ ಕಡ್ಡಾಯವಾಗಿ ಬರಬೇಕು ಎಂಬ ಸೂಚನೆ ಇದೆ. ಆದರೆ ಟ್ರಿಪ್ ನೆಪದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಶಾಸಕ ಗೌರಿಶಂಕರ್ ನಾಪತ್ತೆಯಾಗಿದ್ದಾರೆ.
ಕುಟುಂಬದ ಜೊತೆ ಫಾರಿನ್ ಟ್ರಿಪ್ನಲ್ಲಿ ಇದ್ದೀನಿ. ಫಾರಿನ್ನಿಂದ ಇಂದು ಸಂಜೆ ಬೆಂಗಳೂರಿಗೆ ಬರುವೆ. ನಾಳೆ ಮತ ಹಾಕ್ತೀನಿ ಎಂದು ಶಾಸಕ ಗೌರಿಶಂಕರ್ ಹೇಳಿರುವುದು ಜೆಡಿಎಸ್ನಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಲು ಕಾಂಗ್ರೆಸ್ ಸಂಚು ರೂಪಿಸಿದ್ದು, ಗೌರಿಶಂಕರ್ ಅವರು ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಿ ಉಲ್ಟಾ ಹೊಡೀತಾರಾ? ಎಂಬ ಆತಂಕ ಜೆಡಿಎಸ್ಗೆ ಕಾಡುತ್ತಿದೆ.
ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಗೌರಿಶಂಕರ್ ಹಾಜರಾಗೋದು ಅನುಮಾನ ಎನ್ನುತ್ತಿವೆ ಮೂಲಗಳು. ಅತ್ತ ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಜೆಡಿಎಸ್ಗೆ ಕೈಕೊಡುವ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್ ಭದ್ರಕೋಟೆಯಂತಿದ್ದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ ಜೆಡಿಎಸ್ ಪಾಲಿಗೆ ಮುಳ್ಳಾಗಿರುವುದಂತೂ ನಿಜ.
ಕುಮಾರಸ್ವಾಮಿ ಅವ್ರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮ್ಮನ್ನು ಬೆಂಬಲಿಸಿ… ಜೆಡಿಎಸ್ಗೆ ಆಫರ್ ಇಟ್ಟ ಸಿದ್ದು