ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಡಿ.12ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು (ಬುಧವಾರ) ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ.
ಒಟ್ಟು 35 ನಿರ್ದೇಶಕರ ಸ್ಥಾನಕ್ಕೆ 221 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ತುಮಕೂರಿಗೆ 2 ಸ್ಥಾನ. ತುಮಕೂರು ಜಿಲ್ಲೆಯಲ್ಲಿ 2 ಸ್ಥಾನಕ್ಕೆ ಒಟ್ಟು 7 ಮಂದಿ ಸ್ಪರ್ಧಿಸಿದ್ದರು. ಇವರಲ್ಲಿ ಹನುಮಂತರಾಯಪ್ಪ ಮತ್ತು ಲೋಕೇಶ್ ನಾಗರಾಜಯ್ಯ ಗೆಲುವಿನ ನಗೆ ಬೀರಿದ್ದಾರೆ.
14,901 ಮತ ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲಿ ಹನುಮಂತರಾಯಪ್ಪ ಗೆದ್ದರೆ, 11,027 ಮತ ಪಡೆದು ಎರಡನೇ ಪ್ರಾಶಸ್ತ್ಯದಲ್ಲಿ ಲೋಕೇಶ್ ನಾಗರಾಜಯ್ಯ ಜಯಗಳಿಸಿದ್ದಾರೆ.
ತುಮಕೂರು ಜಿಲ್ಲೆ ಸ್ಪರ್ಧಿಸಿದ್ದವರ ಹೆಸರು ಮತ್ತು ಪಡೆದ ಮತಗಳ ವಿವರ ಇಲ್ಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಮೂವರು ಕುಣಿಗಲ್ ಮೂಲದವರು. ಲೋಕೇಶ್ ನಾಗರಾಜಯ್ಯ ಅವರು ಜೆಡಿಎಸ್ನ ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರ, ಉದ್ಯಮಿಯೂ ಆದ ವಕೀಲ ಸಿಕೆಎಂ ಗೌಡ ಕುಣಿಗಲ್ ಮೂಲದವರು. ಬೆಳ್ಳಿ ಲೋಕೇಶ್ ಆರಂಭದಲ್ಲಿ ಕುಣಿಗಲ್ನಲ್ಲಿ ಕೆಲಸ ನಿರ್ವಹಿಸಿ ನಂತರ ತುಮಕೂರಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಸುಜಾತಾ ನಂಜೇಗೌಡ ಸಹ ಕುಣಿಗಲ್ ಮೂಲದವರು. ಒಟ್ಟು 31,181 ಮತದಾರರಿದ್ದು, ಕುಣಿಗಲ್ ತಾಲೂಕಿನಲ್ಲೇ ಅತಿ ಹೆಚ್ಚು(9,710) ಮತದಾರರು ಇದ್ದಾರೆ. 2ನೇ ಸ್ಥಾನದಲ್ಲಿ ತುಮಕೂರು, 3ನೇ ಸ್ಥಾನದಲ್ಲಿ ತುರುವೇಕೆರೆ ಇದೆ.
ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್ ವೈರಲ್ ಆಗ್ತಿದೆ ಈ ವಿಡಿಯೋ
ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…