ಬೆಂಗಳೂರು: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ಸ್ನೇಹಿತರನ್ನು ಬದುಕಿಸಿ, ಪ್ರಾಣ ಬಿಟ್ಟಿದ್ದ ಬಾಲಕನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮರಣೋತ್ತರ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಲಕನ ತಂದೆ ತಾಯಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ಮಡಿಕೇರಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿತ್ತು. ಮಡಿಕೇರಿಯ ಗೋಣಿಕೊಪ್ಪಲಿನ ಲಯನ್ಸ್ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು, ಸ್ಕೌಟ್ಸ್ ಗೈಡ್ಸ್ನ 39 ವಿದ್ಯಾರ್ಥಿಗಳ ತಂಡವಾಗಿ ದುಬಾರೆ ಕ್ಯಾಂಪ್ಗೆ ಪಿಕ್ನಿಕ್ಗೆ ಹೋಗಿದ್ದರು. ಆ ವೇಳೆ ಕೆಲ ಮಕ್ಕಳು ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾರೆ. ಅಲ್ಲಿ ನದಿಯ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಅಲ್ಲಿ ಸಮಯಪ್ರಜ್ಞೆ ಮೆರೆದಿದ್ದ ಬಾಲಕ ಲೆನಿನ್ ಬೋಪಣ್ಣ, ನಾಲ್ವರು ಸಹಪಾಠಿಗಳನ್ನು ಸುಳಿಯಿಂದ ಉಳಿಸಿದ್ದ. ಆದರೆ ಅದೇ ಸುಳಿಗೆ ಸಿಕ್ಕು ತಾನು ಪ್ರಾಣ ಬಿಟ್ಟಿದ್ದ.
ಲೆನಿನ್ನಗೆ ಇದೀಗ ಮರಣೋತ್ತರವಾಗಿ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಂದೆ ಮದೀರಾ ಹರೀಶ್ ಮತ್ತು ತಾಯಿ ಕವಿತಾ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ನನ್ನ ಮಗನ ಧೀರತನಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಮದೀರಾ ಹರೀಶ್ ಹೇಳಿದ್ದಾರೆ. (ಏಜೆನ್ಸೀಸ್)
ಕೇರಳ ಚುನಾವಣೆಗೆ ಮುನ್ನವೇ ಕೈ ಕೊಟ್ಟ ಕಾಂಗ್ರೆಸ್ ನಾಯಕ! ಪಕ್ಷದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪ