More

    ಮತಾಂತರಗೊಂಡ ಕಳ್ಳಿಗೆ ಜೈನ ಮಂದಿರಗಳೇ ಟಾರ್ಗೆಟ್!

    ಬೆಂಗಳೂರು: ಜೈನ ಮಂದಿರಕ್ಕೆ ಭಕ್ತರ ಸೋಗಿನಲ್ಲಿ ಹೋಗಿ ಪೂಜಾ ಸಾಮಗ್ರಿಯನ್ನು ಕಳವು ಮಾಡಿದ್ದ ಕಳ್ಳಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

    ಶಾಮಣ್ಣ ಗಾರ್ಡನ್ ನಿವಾಸಿ ಮುನ್ನಿ ಬಾನು (32) ಬಂಧಿತೆ. ಮೂಲ ಜೈನ ಧರ್ಮದ ಮುನ್ನಿ ಬಾನು, ಮುಸ್ಲಿಂ ಯುವಕನನನ್ನು ಪ್ರೀತಿಸಿ ಮದುವೆಯಾಗಿದ್ದು, ಶಾಮಣ್ಣ ಗಾರ್ಡನ್‌ನಲ್ಲಿ ಪತಿ, ಮಕ್ಕಳ ಜತೆ ನೆಲೆಸಿದ್ದಾಳೆ. ಕುಟುಂಬ ಸಾಗಿಸಲು ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶಕ್ಕೆ ಮುನ್ನಿ ಬಾನು, ಜೈನ ಧರ್ಮ ಸಂಪ್ರದಾಯ ಗೊತ್ತಿದ್ದ ಕಾರಣ ಜೈನ ಮಂದಿರಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಳು.

    ಅ.16ರಂದು ಮಾಗಡಿ ರಸ್ತೆ ಜೈನ ಮಂದಿರದಲ್ಲಿ ದುರ್ಗಾಷ್ಠಮಿ ಪ್ರಯುಕ್ತ ಬೆಳ್ಳಿಯ ಪೂಜಾ ಸಾಮಗ್ರಿಯನ್ನು ತೆಗೆದು ಇಟ್ಟಿದ್ದರು. ಇದೇ ವೇಳೆ ಭಕ್ತರ ಸೋಗಿನಲ್ಲಿ ಪ್ರವೇಶಿಸಿದ ಮುನ್ನಿ ಬಾನು, ಯಾರಿಗೂ ಗೊತ್ತಾಗದಂತೆ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದಳು.

    ಈ ಬಗ್ಗೆ ಇಂದಿರ ಚಂದ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಂ. ಸದಾನಂದ ನೇತೃತ್ವದ ತಂಡ ಜೈನ ಮಂದಿರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು. ಅಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಮುನ್ನಿ ಬಾನು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಈ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೋಪಿತೆ ಸೆರೆಸಿಕ್ಕಿದ್ದಾಳೆ. ಕಳವು ಮಾಡಿದ್ದ 20 ಸಾವಿರ ರೂ. ಮೌಲ್ಯದ 379 ಗ್ರಾಂ ಬೆಳ್ಳಿ ಪೂಜಾ ಸಾಮಗ್ರಿಯನ್ನು ಜಪ್ತಿ ಮಾಡಲಾಗಿದೆ. ಈ ಹಿಂದೆಯೂ ಮೂರು ಜೈನ ಮಂದಿರಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಾನುವಾರುಗಳಿಗೆ ಆಸರೆಯಾಗಿದ್ದ ಪೊಲೀಸ್​ ಇನ್​ಸ್ಪೆಕ್ಟರ್ ಮಹಮ್ಮದ್ ರಫೀಕ್ ನಿಧನ

    ಅಶ್ಲೀಲ ವಿಡಿಯೋ ನೋಡುತ್ತಲೇ 6 ವರ್ಷದ ಬಾಲೆಯನ್ನ ಕೊಂದ ಮೂವರು ಅಪ್ರಾಪ್ತರು!

    ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts