ಬೆಂಗಳೂರು: ‘ಪುನೀತ್ ರಾಜ್ಕುಮಾರ್ ನನ್ನ ಅಣ್ಣನಂತೆ. ಅವರ ಮುಖ ನನ್ನ ಎದುರು ಕಾಣಿಸ್ತಿದೆ. ನನ್ನ ಹುಟ್ಟುಹಬ್ಬದ ದಿನ ಪುನೀತ್ ಸಾವಿನ ಸುದ್ದಿ ಬಂತು. ಅವರ ಸಾವಿನ ಸುದ್ದಿಯನ್ನ 2 ದಿನ ಆದರೂ ನನಗೆ ನಂಬಲು ಆಗಲೇ ಇದೆ. ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ನೋವಿನ ಸಂಗತಿ. ಪುನೀತ್(PuneethRajkumar) ಅವರ ಪಾರ್ಥೀವ ಶರೀರ ನೋಡುವ ಧೈರ್ಯ ನನಗೆ ಬರಲಿಲ್ಲ’ ಎಂದು ಭಾವುಕರಾಗುತ್ತಲೇ ‘ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ಉಳಿಸಿಕೊಳ್ಳುವೆ ಪುನೀತ್ ಅಣ್ಣ’ ಎಂದು ತಮಿಳು ನಟ ವಿಶಾಲ್(Vishal) ಭಾವುಕರಾದರು.
ಅರಮನೆ ಮೈದಾನದಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶಾಲ್, ಪುನೀತ್ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಅದರಿಂದಲೇ ಕನ್ನಡ ನಾಡಿನಲ್ಲಿ ಅವರು ದೇವರಾಗಿಯೇ ನಿಂತರು. ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ನಾನು ಉಳಿಸಿಕೊಳ್ಳುವೆ ಪುನೀತಣ್ಣ. ನಾನು ಪ್ರಚಾರಕ್ಕಾಗಿಯೋ, ಮತ್ತ್ಯಾರನ್ನೋ ಮೆಚ್ಚಿಸಲು ಈ ಮಾತನ್ನು ಹೇಳುತ್ತಿಲ್ಲ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಮನೆ ಮಾಡಿಕೊಳ್ಳಲು ಹಣ ಎತ್ತಿಟ್ಟಿದ್ದೆ. ಪರವಾಗಿಲ್ಲ, ಮನೆಯನ್ನ ಮುಂದಿನ ಬಾರಿ ಮಾಡಿಕೊಳ್ಳುವೆ. ಪುನೀತ್ ನಡೆಸುತ್ತಿದ್ದ ಶಕ್ತಿಧಾಮವನ್ನು(Shaktidhama) ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಡಿ. ಕೊಟ್ಟ ಮಾತನ್ನ ಉಳಿಸಿಕೊಳ್ತೇನೆ ಎಂದು ವಿಶಾಲ್ ಮನವಿ ಮಾಡಿದರು.
ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ನಮ್ಮ ಅಪ್ಪ ಕನ್ನಡಿಗ ಎಂದು ನಡುವೆ ಕನ್ನಡದಲ್ಲಿ ಮಾತನಾಡಿದ ವಿಶಾಲ್, ಅಪ್ಪು ಒಳ್ಳೆಯವರು. ಅವರ ಪಾರ್ಥಿವ ಶರೀರವನ್ನು ನೋಡಲು ನನಗೆ ಧೈರ್ಯವೇ ಬರಲಿಲ್ಲ. ಈಗಲೂ ಅವರು ಇಲ್ಲ ಎಂಬುದನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಭಾವುಕರಾದರು.
ಪುನೀತ ನಮನ ಕಾರ್ಯಕ್ರಮದಲ್ಲಿ ಮೂಸೂರಿನ ಶಕ್ತಿಧಾಮ ಮಕ್ಕಳೂ ಪಾಲ್ಗೊಂಡಿದ್ದರು. ವಿಶಾಲ್ರ ಈ ಮಾತನ್ನು ಕೇಳಿ ಆ ಮಕ್ಕಳು ಮತ್ತಷ್ಟು ಭಾವುಕರಾದರು.
ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ
ಪುನೀತ ನಮನದಲ್ಲಿ ಮನಕಲಕುವ ದೃಶ್ಯ: ಕಾರ್ಯಕ್ರಮದುದ್ದಕ್ಕೂ ಶಿವಣ್ಣ, ಅಶ್ವಿನಿ ಕಣ್ಣೀರು!
ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಬೊಮ್ಮಾಯಿ ಘೋಷಣೆ
ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ
ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ… ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್ ಮಗಳು