More

    ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ… ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು

    ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಬದುಕಿನ ಪಯಣ ಕುರಿತು ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದಂತೆ ಪತ್ನಿ ಅಶ್ವಿನಿ ಪುನೀತ್​, ನಟ ಶಿವರಾಜ್​ಕುಮಾರ್​ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಅಲ್ಲಿ ನೆರೆದಿದ್ದ ಸಿನಿದಿಗ್ಗಜ್ಜರು, ಗಣ್ಯರು ಕಣ್ಣೀರು, ಚಿತ್ರರಂಗ ಮಾತ್ರವಲ್ಲ, ಟಿವಿಗಳಲ್ಲಿ ನೇರ ಪ್ರಸಾರ ನೋಡುತ್ತಿದ್ದ ಅಭಿಮಾನಿಗಳ ಮನಸುಗಳಲ್ಲೂ ನೋವಿನ ಭಾರ ಆವರಿಸಿ ಕಣ್ಣಂಚಲ್ಲೂ ನೀರು ಜಿನುಗಿತು.

    ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ... ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು

    ಕಿರುಚಿತ್ರ ಪ್ರದರ್ಶನ ಬಳಿಕ ಜ್ಯೋತಿ ಬೆಳಗಿ ದೀಪ ನಮನ ಜತೆಗೆ ಗೀತಗಾಯನ ಮೊಳಗಿತು. ನಾಗೇಂದ್ರ ಪ್ರಸಾದ್​ ಅವರು ರಚಿಸಿದ ‘ಮುತ್ತು ರಾಜ ಹೆತ್ತ ಮುತ್ತೆ ಎತ್ತ ಹೋಯಿತೇ…’ ಗೀತೆ ಮತ್ತಷ್ಟು ಭಾವುಕವನ್ನಾಗಿಸಿತು. ಈ ವೇಳೆ ವಿದ್ಯುತ್​ ದೀಪಗಳನ್ನು ಆರಿಸಲಾಗಿತ್ತು. ಕತ್ತಲಲ್ಲಿ ದೀಪ ಮಾತ್ರವೇ ಪ್ರಜ್ವಲಿಸುತ್ತಿತ್ತು.

    ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ... ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು

    ಬಳಿಕ ಎಲ್ಲರೂ ಎದ್ದು ನಿಂತು ಮೌನಾಚಾರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಆ ವೇಳೆ ಸಾಕ್ಷತ್​ ಅಪ್ಪು ಅವರೇ ಪರದೆಯಲ್ಲಿ ಮಾತನಾಡುತ್ತಿದ್ದಂತೆ ಭಾಸವಾಯ್ತು. ‘ಯಾಕೆ ಎಲ್ಲರೂ ಹೀಗಿದ್ದೀರಿ, ನಾನು ಎಲ್ಲೂ ಹೋಗಿಲ್ಲ, ನಿಮ್ಮೊಂದಿಗೇ ಇದ್ದೇನೆ…’ ಎಂದರು. ಪರದೆಯ ಮೇಲೆ ಕಂಡಂತಹ ಆ ಚಿತ್ರಣವನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿತ್ತು. ಇದಾದ ಬಳಿಕ ಗಣ್ಯರು ವೇದಿಕೆ ಬಳಿ ಇಟ್ಟ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. (ಇದಿಷ್ಟು ಕಾರ್ಯಕ್ರಮ ಆರಂಭದ ಮಾಹಿತಿ)

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts