ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಬದುಕಿನ ಪಯಣ ಕುರಿತು ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದಂತೆ ಪತ್ನಿ ಅಶ್ವಿನಿ ಪುನೀತ್, ನಟ ಶಿವರಾಜ್ಕುಮಾರ್ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಅಲ್ಲಿ ನೆರೆದಿದ್ದ ಸಿನಿದಿಗ್ಗಜ್ಜರು, ಗಣ್ಯರು ಕಣ್ಣೀರು, ಚಿತ್ರರಂಗ ಮಾತ್ರವಲ್ಲ, ಟಿವಿಗಳಲ್ಲಿ ನೇರ ಪ್ರಸಾರ ನೋಡುತ್ತಿದ್ದ ಅಭಿಮಾನಿಗಳ ಮನಸುಗಳಲ್ಲೂ ನೋವಿನ ಭಾರ ಆವರಿಸಿ ಕಣ್ಣಂಚಲ್ಲೂ ನೀರು ಜಿನುಗಿತು.
ಕಿರುಚಿತ್ರ ಪ್ರದರ್ಶನ ಬಳಿಕ ಜ್ಯೋತಿ ಬೆಳಗಿ ದೀಪ ನಮನ ಜತೆಗೆ ಗೀತಗಾಯನ ಮೊಳಗಿತು. ನಾಗೇಂದ್ರ ಪ್ರಸಾದ್ ಅವರು ರಚಿಸಿದ ‘ಮುತ್ತು ರಾಜ ಹೆತ್ತ ಮುತ್ತೆ ಎತ್ತ ಹೋಯಿತೇ…’ ಗೀತೆ ಮತ್ತಷ್ಟು ಭಾವುಕವನ್ನಾಗಿಸಿತು. ಈ ವೇಳೆ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಕತ್ತಲಲ್ಲಿ ದೀಪ ಮಾತ್ರವೇ ಪ್ರಜ್ವಲಿಸುತ್ತಿತ್ತು.
ಬಳಿಕ ಎಲ್ಲರೂ ಎದ್ದು ನಿಂತು ಮೌನಾಚಾರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಆ ವೇಳೆ ಸಾಕ್ಷತ್ ಅಪ್ಪು ಅವರೇ ಪರದೆಯಲ್ಲಿ ಮಾತನಾಡುತ್ತಿದ್ದಂತೆ ಭಾಸವಾಯ್ತು. ‘ಯಾಕೆ ಎಲ್ಲರೂ ಹೀಗಿದ್ದೀರಿ, ನಾನು ಎಲ್ಲೂ ಹೋಗಿಲ್ಲ, ನಿಮ್ಮೊಂದಿಗೇ ಇದ್ದೇನೆ…’ ಎಂದರು. ಪರದೆಯ ಮೇಲೆ ಕಂಡಂತಹ ಆ ಚಿತ್ರಣವನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿತ್ತು. ಇದಾದ ಬಳಿಕ ಗಣ್ಯರು ವೇದಿಕೆ ಬಳಿ ಇಟ್ಟ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. (ಇದಿಷ್ಟು ಕಾರ್ಯಕ್ರಮ ಆರಂಭದ ಮಾಹಿತಿ)
ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ
ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್ ಕುರಿತು ಜನರಿಗೆ ಸತ್ಯ ತಿಳಿಸಿ…