ರಾಮನಗರ: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ ದಾಖಲಿಸುತ್ತಿರುವ ಪೊಲೀಸರು ಇದೀಗ 61 ಮಂದಿ ವಿರುದ್ಧ ಎಫ್ಐಆರ್ ಮಾಡಿದ್ದಾರೆ.
ಮೊದಲ ದಿನದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ 31 ಮಂದಿ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ಸಾತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಡಿ.ಕೆ. ಶಿವಕುಮಾರ್, ಸಂಸದ ಸುರೇಶ್ ಸೇರಿ ಒಟ್ಟು 41 ಮಂದಿ ವಿರುದ್ಧ ಎರಡನೇ ಕೇಸ್ ದಾಖಲಾಗಿತ್ತು. ಈ ಪೈಕಿ ಕೃಷ್ಣಭೈರೇಗೌಡ, ಎಚ್. ಆಂಜನೇಯ, ಮಧು ಬಂಗಾರಪ್ಪ ಸೇರಿ 28 ಹೊಸಬರ ಹೆಸರು 2ನೇ ಎಫ್ಐಆರ್ನಲ್ಲಿ ಇದೆ. ಇದೀಗ ಕರೊನಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಡಿಕೆಶಿ ಸೇರಿದಂತೆ 64 ಜನರ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದೆ.
3ನೇ ಎಫ್ಐಆರ್ನಲ್ಲಿ ಯಾರ ಹೆಸರಿದೆ?: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎ1 ಆರೋಪಿ ಆದರೆ, ಸಂಸದ ಡಿ.ಕೆ. ಸುರೇಶ್ ಎ2, ಸಿದ್ದರಾಮಯ್ಯ ಎ3 ಆರೋಪಿ. ಎಸ್. ರವಿ, ಧ್ರುವನಾರಾಯಣ್, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾಧು, ಮಂಜುನಾಥ ಹುಣಸೂರು, ಸಲೀಂ ಅಹಮದ್, ಎಚ್.ಸಿ.ಮಹದೇವಪ್ಪ, ಲಕ್ಷ್ಮೀನಾರಾಯಣ, ಯತೀಂದ್ರ ಸಿದ್ದರಾಮಯ್ಯ, ಸುನಿಲ್ ಘೋಷ್, ನಲಪಾಡ್ ಹ್ಯಾರಿಸ್, ಕೋನಪ್ಪರೆಡ್ಡಿ, ಕೆ.ಎನ್.ಮರೀಗೌಡ, ಡಾ. ಎಚ್.ಡಿ. ರಂಗನಾಥ್, ಬಿ.ಕೆ.ಸೋಮಶೇಖರ್, ಮುಖ್ಯಮಂತ್ರಿ ಚಂದ್ರು, ಅಂಜನ್ ಮೂರ್ತಿ, ಎಂ.ನಾರಾಯಣಸ್ವಾಮಿ, ವಿನಯ್ ಕುಲಕರ್ಣಿ, ವಿನೋದ್ ಸೂಟಿ, ಕೆ.ಬಿ/ಕೋಳಿವಾಡ, ಐವನ್ ಡಿಸೋಜ, ರಘುನಂದನ್ ರಾಮಣ್ಣ, ಪಿರಿಯಾಪಟ್ಟಣ ವೆಂಕಟೇಶ್, ಕನಕಪುರದ ಶಂಭುಲಿಂಗಶೆಟ್ಟಿ, ಕನಕಪುರದ ಜೋಸೆಫ್, ಅನಿಲ್ ಕುಮಾರ್, ಮಂಜಣ್ಣ, ಮುನಿಯಪ್ಪ, ಕಬ್ಬಾಳಗೌಡ ಸೇರಿದಂತೆ 64 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.