More

    ಮಂಗಳೂರಲ್ಲಿ ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ! ಡೆತ್​ನೋಟ್​ನಲ್ಲಿ ಕಣ್ಣೀರ ಕಥೆ

    ಮಂಗಳೂರು: ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಬಲವಂತದ ಮತಾಂತರಕ್ಕೆ ಇಡೀ ಕುಟುಂಬ ಬಲಿಯಾಗಿದೆ. ಸಾವಿಗೂ ಮುನ್ನ ಮನೆಯ ಯಜಮಾನ ಬರೆದ ಡೆತ್​ನೋಟ್​ನಲ್ಲಿ ಮತಾಂತರ ಕಿರುಕುಳ ಕುರಿತು ಇಂಚಿಂಚೂ ವಿವರಿಸಲಾಗಿದೆ.

    ನಾಗೇಶ್ ಶೆರಗುಪ್ಪಿ(30) ಮತ್ತು ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಮೃತ ದುರ್ದೈವಿಗಳು. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಈ ಕುಟುಂಬ, ಮಂಗಳೂರಿನ ಮೋರ್ಗನ್ಸ್ ಗೇಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಾಗೇಶ್ ಚಾಲಕನಾಗಿದ್ದ. ವಿಜಯಲಕ್ಷ್ಮೀ ಅಪಾರ್ಟ್​ಮೆಂಟ್​ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಅಂದರೆ 2021ರ ಅಕ್ಟೋಬರ್​ನಲ್ಲಿ ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಪತ್ನಿಗಾಗಿ ಹುಡುಕಾಟ ನಡೆಸಿದ್ದ ನಾಗೇಶ್, ಪತ್ನಿ ಕೆಲಕ್ಕೆಂದು ಹೋಗಿದ್ದ ಪತ್ನಿ ವಾಪಸ್​ ಮನೆಗೆ ಬಂದಿಲ್ಲ, ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ, ದಯವಿಟ್ಟು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ.

    ಗಂಡ ಕೊಟ್ಟ ಮಿಸ್ಸಿಂಗ್​ ಕೇಸ್​ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ನೇರವಾಗಿ ಬಂದ ವಿಜಯಲಕ್ಷ್ಮೀ, ನನ್ನ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅದಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಳು. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು. ಇದೀಗ ನಾಗೇಶ್​ ಸೇರಿದಂತೆ ಇಡೀ ಕುಟುಂಬ ದುರಂತ ಅಂತ್ಯಕಂಡಿದೆ.

    ನಿನ್ನೆ (ಮಂಗಳವಾರ) ರಾತ್ರಿ ಮನೆಗೆ ಫ್ರೈಡ್​ ರೈಸ್ ತಂದಿದ್ದ​ ನಾಗೇಶ್​, ಅದರಲ್ಲಿ ವಿಷ ಹಾಕಿ ಪತ್ನಿ-ಮಕ್ಕಳಿಗೆ ತಿನ್ನಿಸಿದ್ದಾನೆ. ಬಳಿಕ ಪತ್ನಿಯನ್ನು ಉಸಿರುಗಟ್ಟಿಸಿ ಮಲಗಿದ್ದಲ್ಲೇ ಕೊಂದಿದ್ದಾನೆ. ಮಕ್ಕಳು ವಿಷಾಹಾರ ತಿಂದು ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ನಾಗೇಶ್​ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಧುವಾರ ಬೆಳಗ್ಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮಂಗಳೂರು ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ನಾಗೇಶ್​ರ ಡೆತ್​ನೋಟ್​ ಪತ್ತೆಯಾಗಿದ್ದು, ಸಾವಿಗೆ ಮತಾಂತರವೇ ಕಾರಣ ಎಂದು ಬರೆಯಲಾಗಿದೆ.

    ‘ನಮ್ಮ ಸಾವಿಗೆ ನೂರ್ ಜಹಾನ್ ಎಂಬಾಕೆಯೇ ಕಾರಣ. ಆಕೆ ನನ್ನ ಪತ್ನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ಆಗುತ್ತಿತ್ತು. ನಾನು ಎಷ್ಟೇ ಮನವೊಲಿಸಿದರೂ ನನ್ನ ಪತ್ನಿ ವಿಜಯಲಕ್ಷ್ಮೀ ನನ್ನ ಮಾತನ್ನು ಕೇಳುತ್ತಿರಲಿಲ್ಲ…’ ಎಂದು ಸಾವಿಗೂ ಮುನ್ನ ನಾಗೇಶ್​ ಡೆತ್​ನೋಟ್​ನಲ್ಲಿ ವಿವರಿಸಿದ್ದಾರೆ.

    ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ

    ಬೆಂಗಳೂರಲ್ಲಿ ತಡರಾತ್ರಿ ಪಿಎಸ್​ಐ ಮತ್ತು ಪೇದೆ ಮೇಲೆ ಮಾರಣಾಂತಿಕ ಹಲ್ಲೆ: ಕ್ಷಮೆ ಕೇಳಿದ್ರೂ ಬಿಡದ ಪುಂಡರು

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts