More

    ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ

    ನಂಜನಗೂಡು: ಪತ್ನಿ ಬಾಣಂತನಕ್ಕೆ ಹೋದಾಗ, ಸಂಬಂಧದಲ್ಲಿ ನಾದಿನಿಯಾಗಬೇಕಾದ ಬಾಲಕಿ ಮನೆಗೆ ಬರುತ್ತಿದ್ದ ಯುವಕ, ಫೋಟೋವೊಂದನ್ನು ಇಟ್ಟುಕೊಂಡು ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತೆ 7 ತಿಂಗಳ ಗರ್ಭಿಣಿಯಾದ ಬಳಿಕ ಕೃತ್ಯ ಬಯಲಾಗಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

    ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದ ನಾಗಶೆಟ್ಟಿ ಎಂಬುವರ ಮಗ ಪ್ರದಿಪ(26) ಆತ್ಮಹತ್ಯೆಗೆ ಯತ್ನಿಸಿ ಮೈಸೂರಿನ ಕೆ.ಆರ್​.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾರೋಪುರ ನಿವಾಸಿಯಾಗಿರುವ ಮಹಿಳೆಯೊಬ್ಬರು ಪ್ರದಿಪನಿಗೆ ಮಂಡ್ಯದಲ್ಲಿರುವ ತನ್ನ ಅಕ್ಕನ ಮಗಳನ್ನೇ ಮದುವೆ ಮಾಡಿಸಿದ್ದರು. ಹೀಗಾಗಿ, ಸಂಬಂಧದಲ್ಲಿ ನಾದಿನಿಯಾಗಬೇಕಾದ ಸಂತ್ರಸ್ತೆಯ ಮನೆಗೆ ಪ್ರದಿಪ ಆಗಾಗ ಹೋಗಿಬರುತ್ತಿದ್ದ. ಈ ನಡುವೆ, ಪತ್ನಿಯನ್ನು ಬಾಣಂತನಕ್ಕೆ ಕಳುಹಿಸಿದ್ದ ಪ್ರದಿಪ, ಸಂತ್ರಸ್ತೆಯ ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತೆ ಆತನನ್ನು ಸಲುಗೆಯಿಂದ ತಬ್ಬಿಕೊಂಡಿದ್ದ ಫೋಟೋವನ್ನು ಎಲ್ಲರಿಗೂ ಶೇರ್​ ಮಾಡುವುದಾಗಿ ಬೆದರಿಸಿ ಆಕೆಯ ಜತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಎನ್ನಲಾಗಿದೆ.

    ಬಾಲಕಿ ಮಾಸಿಕ ಋತುಸ್ರಾವ ಆಗದಿರುವುದರಿಂದ ಅನುಮಾನನೊಂಡ ಆಕೆಯ ತಾಯಿ ನ. 22ರಂದು ವೈದ್ಯರ ಬಳಿ ತಪಾಸಣೆಗೆ ಒಳಪಡಿಸಿದಾಗ ಏಳು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವೈದ್ಯರು ತಿ.ನರಸೀಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಎಚ್ಚೆತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಹಾಗೂ ಇತರ ಅಧಿಕಾರಿಗಳ ತಂಡ, ಅಪ್ರಾಪ್ತೆ ಹಾಗೂ ಆಕೆಯ ಕುಟುಂಬದಿಂದ ಹೇಳಿಕೆ ಪಡೆದುಕೊಳ್ಳಲು ಡಿ. 2ರಂದು ಹಾರೋಪುರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ವಿಚಲಿತನಾದ ಆರೋಪಿ ಪ್ರದಿಪ, ಅದೇ ದಿನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡಿ.3ರಂದು ಆತನ ವಿರುದ್ಧ ಸಿಡಿಪಿಒ ಬಿಳಿಗೆರೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

    ಸಂತ್ರಸ್ತೆಗೆ ಮೈಸೂರಿನ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಪ್ರದಿಪ ಗುಣಮುಖನಾದ ಬಳಿಕ ವೈದ್ಯರ ಸಲಹೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ಹಾಲು ವ್ಯಾಪಾರಿ ಜತೆ ಅಕ್ರಮ ಸಂಬಂಧ ಶಂಕೆ: ಹಾಡಹಗಲೇ ನಡೆದೇ ಹೋಯ್ತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts