ಆನೇಕಲ್: ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಆನೇಕಲ್ ಪಟ್ಟಣದ ನಿವಾಸಿ ನಂದಕುಮಾರ್ ಮೃತ ಯುವಕ ಎಂದು ಗುರುತಿಸಲಾಗಿದೆ. ತಮಿಳುನಾಡಿ ಧರ್ಮಪುರಿಯ ರೈಲ್ವೆ ಹಳಿ ಮೇಲೆ ಭಾನುವಾರ ಯುವಕನ ಶವ ಪತ್ತೆಯಾಗಿದೆ.
ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಹೋದವ ಮನೆಗೆ ವಾಪಸ್ ಆಗಿರಲಿಲ್ಲ. ಚಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಆನೇಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಈತ ಸಾಲ ಮಾಡಿಕೊಂಡು ಊರು ಬಿಟ್ಟಿದ್ದ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿಯೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. (ದಿಗ್ವಿಜಯ ನ್ಯೂಸ್)
ಹಣಕ್ಕಾಗಿ ಮನೆ ಮಾಲೀಕನ ಮಗನನ್ನೇ ಕಿಡ್ನ್ಯಾಪ್ ಮಾಡಿ ವಿಫಲ ಯತ್ನ, 24 ಗಂಟೆಯಲ್ಲೇ ಸೆರೆಸಿಕ್ಕ ಖದೀಮ ದಂಪತಿ!
ಧೂಮ್ ಚಿತ್ರದ ಪ್ರೇರಣೆಯಿಂದ ಶಾಲೆಗೆ ಕನ್ನ: ಕಳ್ಳತನ ಬಳಿಕ ಬೋರ್ಡ್ ಮೇಲೆ ಬರೆದಿದ್ದು ನೋಡಿ ಶಿಕ್ಷಕರೇ ಶಾಕ್!