ಮೈಸೂರು: ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟ ದುರ್ಘಟನೆ ತಿ.ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ರಾಜು ಎಂಬುವರ ಪುತ್ರ ಯಶವಂತ ಕುಮಾರ್(15), ಮಂಚಯ್ಯರ ಮಗ ಮಹದೇವಪ್ರಸಾದ್(14), ಮಲ್ಲಿಕಾರ್ಜುನ ಎಂಬುವರ ಪುತ್ರ ಆಕಾಶ್(15) ಮತ್ತು ನಿಂಗರಾಜು ಅವರ ಪುತ್ರ ಕಿಶೋರ್(13) ಸೇರಿ ನಾಲ್ವರು ಇಂದು ಕೆರೆಯಲ್ಲಿ ಈಜಾಡಲು ಹೋಗಿದ್ದರು.
ಈಜಾಡುತ್ತಿದ್ದ ಈ ನಾಲ್ವರು ಬಾಲಕರು ನೀರಲ್ಲಿ ಮುಳುಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಮತ್ತು ಪೊಲೀಸರು ದೌಡಾಯಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಯಶವಂತ ಕುಮಾರ್ ಮತ್ತು ಮಹದೇವ ಪ್ರಸಾದ್ನ ಮೃತದೇಹಗಳು ಪತ್ತೆಯಾಗಿದ್ದು, ಸಂಜೆ 4 ಗಂಟೆಯಾದರೂ ಮತ್ತಿಬ್ಬರ ಶವ ಸಿಕ್ಕಿರಲಿಲ್ಲ.
ಮತ್ತಿಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರಿದೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವದೊಂದಿಗೆ ನಟಿ ಶನಾಯ ಪ್ರಯಾಣ: ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನಾ ದಿನವೇ ಬಂದಿದ್ದರೂ ಗೈರು! ಬಯಲಾಗ್ತಿದೆ ಸ್ಫೋಟಕ ರಹಸ್ಯ…
ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ