More

    ಕೆರೆಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ದುರಂತ ಸಾವು!

    ಮೈಸೂರು: ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟ ದುರ್ಘಟನೆ ತಿ.ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

    ರಾಜು ಎಂಬುವರ ಪುತ್ರ ಯಶವಂತ ಕುಮಾರ್​(15), ಮಂಚಯ್ಯರ ಮಗ ಮಹದೇವಪ್ರಸಾದ್(14), ಮಲ್ಲಿಕಾರ್ಜುನ ಎಂಬುವರ ಪುತ್ರ ಆಕಾಶ್​(15) ಮತ್ತು ನಿಂಗರಾಜು ಅವರ ಪುತ್ರ ಕಿಶೋರ್(13) ಸೇರಿ ನಾಲ್ವರು ಇಂದು ಕೆರೆಯಲ್ಲಿ ಈಜಾಡಲು ಹೋಗಿದ್ದರು.

    ಕೆರೆಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ದುರಂತ ಸಾವು!ಈಜಾಡುತ್ತಿದ್ದ ಈ ನಾಲ್ವರು ಬಾಲಕರು ನೀರಲ್ಲಿ ಮುಳುಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಮತ್ತು ಪೊಲೀಸರು ದೌಡಾಯಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಯಶವಂತ ಕುಮಾರ್ ​ಮತ್ತು ಮಹದೇವ ಪ್ರಸಾದ್​ನ ಮೃತದೇಹಗಳು ಪತ್ತೆಯಾಗಿದ್ದು, ಸಂಜೆ 4 ಗಂಟೆಯಾದರೂ ಮತ್ತಿಬ್ಬರ ಶವ ಸಿಕ್ಕಿರಲಿಲ್ಲ.

    ಮತ್ತಿಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರಿದೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಶವದೊಂದಿಗೆ ನಟಿ ಶನಾಯ ಪ್ರಯಾಣ: ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನಾ ದಿನವೇ ಬಂದಿದ್ದರೂ ಗೈರು! ಬಯಲಾಗ್ತಿದೆ ಸ್ಫೋಟಕ ರಹಸ್ಯ…

    ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts