More

    ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಚಪ್ಪಾಳೆ ಹೊಡೆಯೋರು ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ

    ಬೆಂಗಳೂರು: ಕಲೆಕ್ಷನ್ ಗಿರಾಕಿ ಎಂಬ ತಮ್ಮ ಮೇಲೆ ಗಂಭೀರ ಆರೋಪ ಬಂದ ಹಿನ್ನೆಲೆ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಪಡಿಸಿ ಕಾಂಗ್ರೆಸ್​ ಪಕ್ಷದ ಕಚೇರಿಯತ್ತ ದೌಡಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ದಿಢೀರ್​ ಸುದ್ದಿಗೋಷ್ಠಿ ನಡೆಸಿದರು.

    ಸಲೀಂ-ಉಗ್ರಪ್ಪ ನಡುವಿನ ಸಂಭಾಷಣೆಯಿಂದ ಖಂಡಿತ ಮುಜಗರ ಆಗಿದೆ. ನನಗೂ ಕಾಂಗ್ರೆಸ್​ಗೂ ಸಂಬಂಧ ಇಲ್ಲದ ವಿಚಾರ ಅವು. ಆಂತರಿಕ ಮಾತುಗಳು. ಅದನ್ನು ನಾನು ಅಲ್ಲಗೆಳೆಯಲ್ಲ. ಮುಲಾಜಿಲ್ಲದೆ ರೆಹಮಾನ್ ಖಾನ್ ಸಮಿತಿ ಕ್ರಮಕೈಗೊಳ್ಳುತ್ತದೆ. ನಾನ್ಯಾಕೆ ಮೀಡಿಯಾವನ್ನು ತಪ್ಪು ಅನ್ನಲಿ? ನಾವು ಮಾತಾಡುವುದನ್ನು ತೋರಿಸುತ್ತೀರಿ. ಬಿಎಸ್​ವೈ- ಅನಂತ್ ಕುಮಾರ್ ಮಾತನಾಡಿದ್ದನ್ನು ತೋರಿಸಿದ್ದೀರಿ. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು ಇರುತ್ತಾರೆ. ಕಲ್ಲು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಮತದಾರರೇ ನನ್ನ ತಕ್ಕಡಿ. ತಕ್ಕಡಿ ಏರಿಸುವವರು ಜನ. ಅವರು- ಇವರು ಮಾತನಾಡಿದರೆ ಏನೂ ಆಗಲ್ಲ ಎಂದು ಖಾರವಾಗಿಯೇ ಡಿಕೆಶಿ ಪ್ರತಿಕ್ರಿಯಿಸಿದರು.

    ಕಲೆಕ್ಷನ್​ ಗಿರಾಕಿ, ಕುಡುಕರ ತರ ಡಿಕೆಶಿ ಮಾತಾಡ್ತಾರೆ ಎಂಬ ಸಲೀಂ ಮಾತಿಗೆ ಸ್ಪಷ್ಟನೆ ಕೊಟ್ಟ ಡಿಕೆಶಿ, ಯಾವ ಪರ್ಸೆಂಟೇಜ್ ವಿಚಾರದಲ್ಲೂ ನಾನು ಭಾಗಿಯಾಗಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಇಲ್ಲ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಹಳ್ಳಿಯಿಂದ ಬಂದವನು. ನನ್ನದೇ ಆದ ಬಾಡಿ ಲಾಂಗ್ವೇಜ್ ಇದೆ ಎಂದರು.

    ಇನ್ನು ಸ್ವಪಕ್ಷದ ನಾಯಕರೇ ಡಿಕೆಶಿ ವಿರುದ್ಧ ಮಾತನಾಡಿದ್ದನ್ನ ಪ್ರಸ್ತಾಪಿಸಿ ಡಿಕೆಶಿಯನ್ನ ಟೀಕಿಸಿದ್ದ ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ, ಬಿಜೆಪಿಯವರು ಭ್ರಷ್ಟಾಚಾರದ ಸಂಸ್ಥಾಪಕರು. ಈ ಸರ್ಕಾರ ಇರುವುದೇ ಭ್ರಷ್ಟಾಚಾರದ ಮೇಲೆ. ನೀರಾವರಿ ಅವ್ಯವಹಾರದ ಬಗ್ಗೆ ತನಿಖೆಯಾಗಲಿ ಎಂದು ಕುಟುಕಿದರು.

    ಡಿಕೆಶಿ ಕಲೆಕ್ಷನ್​ ಗಿರಾಕಿ, ಕುಡುಕನ ಹಾಗೆ ಮಾತಾಡ್ತಾರೆ… ಕೋಲಾಹಲ ಸೃಷ್ಟಿಸಿದೆ ಸಲೀಂ-ಉಗ್ರಪ್ಪ ಸಂಭಾಷಣೆ

    ‘ಡಿಕೆಶಿ ಅವರೇ ನೀವು ಕುಡುಕರೇ? ಕಾಂಗ್ರೆಸ್ ಕಚೇರಿಯಲ್ಲೇ ಎದ್ದಿರುವ ಅನುಮಾನ ಬಗೆಹರಿಸಿ…’

    ಡಿಕೆಶಿ ಕಲೆಕ್ಷನ್​ ಗಿರಾಕಿ: ಡ್ಯಾಮೇಜ್​ ಕಂಟ್ರೋಲ್​ಗೆ ಉಗ್ರಪ್ಪ ಯತ್ನ, ಮಾಧ್ಯಮಗಳ ವಿರುದ್ಧ ಸಿಡಿಮಿಡಿ

    ಡಿ.ಕೆ.ಶಿವಕುಮಾರ್ ಕಲೆಕ್ಷನ್​ ಗಿರಾಕಿ, ಕುಡುಕ… ಎಂದ ಸಲೀಂಗೆ ಗೇಟ್​ಪಾಸ್​! ಉಗ್ರಪ್ಪಗೆ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts