More

    ‘ಶ್ರೀನಿವಾಸಪುರದ ಮಹಾನಾಯಕ’ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ

    ಕೋಲಾರ: ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದ ಪತನಕ್ಕೆ ಗೋಸುಂಬೆ ರಾಜಕಾರಣಿಯೇ ಕಾರಣ. ‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್​ ಅನ್ನು ಟೀಕಿಸುತ್ತ ಬಂದಿದ್ದ ಕಾಂಗ್ರೆಸ್​ನ ಸಿದ್ದರಾಮಯ್ಯಗೆ ಗೋಸುಂಬೆ ರಾಜಕಾರಣಿ ರಮೇಶ್​ಕುಮಾರ್​ ಕಿವಿಯೂದಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದರು ಎಂದು ಕೋಲಾರದಲ್ಲಿ ಭಾನುವಾರ ಎಚ್​ಡಿಕೆ ಆಕ್ರೋಶ ಹೊರಹಾಕಿದರು.

    ‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು. ಇವರ ಕಾರಣದಿಂದಾಗಿಯೇ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಯಿತು. ಕೋಲಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ 7 ಬಾರಿ ಗೆದ್ದಿದ್ದ ದಲಿತ ನಾಯಕ ಕೆ.ಎಚ್​.ಮುನಿಯಪ್ಪ ಅವರ ರಾಜಕೀಯ ಭವಿಷ್ಯ ಮುಗಿಸಿದ ಕೀರ್ತಿಯೂ ರಮೇಶ್​ ಕುಮಾರ್​ಗೆ ಸಲ್ಲಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.

    ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!

    ರಾಜ್ಯದಲ್ಲಿರೋದು ಚಂಬಲ್​ ಕಣಿವೆ ಡಕಾಯಿತರ ಆಡಳಿತ, ಖಜಾನೆ ಲೂಟಿ ಆಗ್ತಿದೆ: ಎಚ್​ಡಿಕೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts