ಕೋಲಾರ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಗೋಸುಂಬೆ ರಾಜಕಾರಣಿಯೇ ಕಾರಣ. ‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಅನ್ನು ಟೀಕಿಸುತ್ತ ಬಂದಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯಗೆ ಗೋಸುಂಬೆ ರಾಜಕಾರಣಿ ರಮೇಶ್ಕುಮಾರ್ ಕಿವಿಯೂದಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದರು ಎಂದು ಕೋಲಾರದಲ್ಲಿ ಭಾನುವಾರ ಎಚ್ಡಿಕೆ ಆಕ್ರೋಶ ಹೊರಹಾಕಿದರು.
‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು. ಇವರ ಕಾರಣದಿಂದಾಗಿಯೇ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಯಿತು. ಕೋಲಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ 7 ಬಾರಿ ಗೆದ್ದಿದ್ದ ದಲಿತ ನಾಯಕ ಕೆ.ಎಚ್.ಮುನಿಯಪ್ಪ ಅವರ ರಾಜಕೀಯ ಭವಿಷ್ಯ ಮುಗಿಸಿದ ಕೀರ್ತಿಯೂ ರಮೇಶ್ ಕುಮಾರ್ಗೆ ಸಲ್ಲಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.
ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!
ರಾಜ್ಯದಲ್ಲಿರೋದು ಚಂಬಲ್ ಕಣಿವೆ ಡಕಾಯಿತರ ಆಡಳಿತ, ಖಜಾನೆ ಲೂಟಿ ಆಗ್ತಿದೆ: ಎಚ್ಡಿಕೆ ಆಕ್ರೋಶ