More

    ಕರ್ನಾಟಕ ಬಂದ್ ಘೋಷಣೆ ವೇಳೆ ಅಪಸ್ವರ: ಸಭೆಯಲ್ಲೇ ಮಾರಾಮಾರಿ

    ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್​ ಮತ್ತು ಶಿವಸೇನೆ ವಿರುದ್ಧ ಸಿಡಿದೆದ್ದಿರುವ ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಎಂಇಎಸ್​ ನಿಷೇಧಕ್ಕೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಇದೀಗ ಎಂಇಎಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿರುವ ಹೊರಾಟಗಾರರು, ಬಂದ್​ಗೂ ಕರೆ ನೀಡಿವೆ. ಡಿ.31ರ ಕರ್ನಾಟಕ ಬಂದ್ ಘೋಷಣೆ ವೇಳೆ ಅಪಸ್ವರ ಕೇಳಿಬಂದಿದ್ದು, ಸಭೆಯಲ್ಲೇ ಗಲಾಟೆ ನಡೆದಿದೆ.

    ಹೋರಾಟದ ಭಾಗವಾಗಿ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ವಾಟಾಳ್​ ನಾಗರಾಜ್​, ಸಾರಾ ಗೋವಿಂದು, ಕರವೇ ಪ್ರವೀಣ್​ ಶೆಟ್ಟಿ ಸಮ್ಮುಖದಲ್ಲಿ ಸಭೆ ನಡೆಯಿತು. ಅಂತಿಮವಾಗಿ ಡಿ.29ರ ಮಧ್ಯರಾತ್ರಿಯೊಳಗೆ ಎಂಇಎಸ್​ ಅನ್ನು ಬ್ಯಾನ್​ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಡಿ.31ರಂದು ಕರ್ನಾಟಕ ಬಂದ್​ ಆಗಲಿದೆ ಎಂದು ವಾಟಳ್​ ನಾಗರಾಜ್​ ಘೋಷಣೆ ಮಾಡುತ್ತಿದ್ದಂತೆ ಬಂದ್​ ಬೇಡ ಎಂದು ವಂದೇ ಮಾತರಂ ಸಂಘಟನೆಯ ಶಿವಕುಮಾರ್ ನಾಯಕ್​ ಅಡ್ಡ ಬಂದರು. ಬಂದ್​ ವಿರೋಧಿಸಿದ ಶಿವಕುಮಾರ್ ನಾಯಕ್​ ವಿರುದ್ಧ ಹಲವರು ಸಂಘಟನೆಗಳ ಮುಖಂಡರು ಮುಗಿಬಿದ್ದರು. ಸುದ್ದಿಗೋಷ್ಠಿಯಿಂದ ಶಿವಕುಮಾರ್ ನಾಯಕ್ರನನ್ನು ಹೊರಕಳಿಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಕೈಕೈ ಮಿಲಾಯಿಸಿದ್ದು, ಶಿವಕುಮಾರ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇನ್ನು ಬಂದ್​ ಕುರಿತ ಸಭೆಯಿಂದ ದೂರವೇ ಉಳಿದಿದ್ದ ಕರವೇ ನಾರಾಯಣ್​ ಗೌಡ, ಎಂಇಎಸ್​ಗೆ ಬುದ್ಧಿ ಕಲಿಸಲು ಬಂದ್​ ಒಂದೇ ಪರಿಹಾರವಲ್ಲ. ನಾಳೆ ಈ ಬಗ್ಗೆ ಚರ್ಚಿಸಿ ಒಂದು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

    ಎಂಇಎಸ್​ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡೆಡ್​ಲೈನ್​ ವಿಧಿಸಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಮನವಿ ಮಾಡಿದ್ದಾರೆ.
    ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಎಂಇಎಸ್​ನ ಪುಂಡಾಟಕ್ಕೆ ಫುಲ್​ ಸ್ಟಾಪ್​ ಹಾಕಲು ಕನ್ನಡಿಗರೆಲ್ಲರೂ ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಬನ್ನಿ ಎಂದು ಕನ್ನಡ ಫಿಲಿಂ ಚೇಂಬರ್​ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ನೀಡಿದ್ದಾರೆ.

    ಡಿ.31ಕ್ಕೆ ಕರ್ನಾಟಕ ಬಂದ್: ಎಂಇಎಸ್​ ಬ್ಯಾನ್​ಗೆ ಆಗ್ರಹಿಸಿ ಸಿಡಿದೆದ್ದ ಕನ್ನಡಿಗರು

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts