ಹುಬ್ಬಳ್ಳಿ: ಕನ್ನಡ ಚಲನಚಿತ್ರ ನಟ, ಚಿಂತಕ, ಕಾದಂಬರಿಕಾರ ಪ್ರೊ. ಜಿ.ಕೆ.ಗೋವಿಂದರಾವ್(84) ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.
1937ರಲ್ಲಿ ಜನಿಸಿದ್ದ ಗೋವಿಂದರಾವ್, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ನಾಟಕ ರಚನೆ, ವಿಮರ್ಶೆ, ಅನುವಾದ ಮಾಡುತ್ತಿದ್ದರು. ರಂಗಭೂಮಿ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್ ಅವರ ಕಥಾ ಸಂಗಮದ 3 ಕಿರುಚಿತ್ರಗಳ ಪೈಕಿ ‘ಹಂಗು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಆ ನಂತರ ಕಾಲೇಜು ರಂಗ, ಕಾನೂರು ಹೆಗ್ಗಡತಿ, ಡಾ.ಕೃಷ್ಣ, ಭಾರತ್ 2000, ರೇ, ಬಂಧನ.. ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇವರ ಕೊನೆಯ ಚಿತ್ರ ರೇ.
ಇತ್ತೀಚಿಗೆ ಚಿತ್ರರಂಗದಿಂದ ದೂರವಿದ್ದ ಗೋವಿಂದ ರಾಜು ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು