More

    ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

    ಬೆಂಗಳೂರು: ಅ.6ರಂದು ವಿಶ್ವಪ್ರಿಯಾ ಲೇಔಟ್​ನ ಚೌಡೇಶ್ವರಿ ಬಡಾವಣೆಯ ಮನೆಯೊಂದರಲ್ಲಿ ತಾಯಿ-ಮಗಳನ್ನು ಚೂರಿಯಿಂದು ಇರಿದು ಕೊಲೆ ಮಾಡಿದ್ದ ಪ್ರಕರಣವನ್ನ ಬೇಗೂರು ಪೊಲೀಸರು ಭೇದಿಸಿದ್ದು, ಬಳ್ಳಾರಿ ಮೂಲದ ಪ್ರಶಾಂತ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳೆಯ ಆ ಕಿರುಕಳ ಸಹಿಸಲಾಗದೆ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.

    ವಿಶ್ವಪ್ರಿಯಾ ಲೇಔಟ್​ನ ಚೌಡೇಶ್ವರಿ ಬಡಾವಣೆಯ ನಿವಾಸಿ ಚಂದ್ರಕಲಾ (40) ಮತ್ತು ಇವರ ಮಗಳು ರಾತನ್ಯ (4) ಕೊಲೆಯಾದವರು. ಬಂಗಾರಕ್ಕನ ಹಳ್ಳಿಯ ಚೆನ್ನವೀರ ಸ್ವಾಮಿ ಮತ್ತು ಚಂದ್ರಕಲಾ ದಂಪತಿ ತನ್ನ ಮಗಳ ಜತೆ 4 ವರ್ಷಗಳ ಹಿಂದೆ ನಗರಕ್ಕೆ ಬಂದು ವಿಶ್ವಪ್ರಿಯಾ ಲೇಔಟ್​ನ ಅಪಾರ್ಟ್ಮೆಂಟ್​ನಲ್ಲಿ ವಾಸಿಸುತ್ತಿದ್ದರು. ಚೆನ್ನವೀರ ಗಾರ್ವೆಂಟ್ಸ್​ ಉದ್ಯೋಗಿ. ಚಂದ್ರಕಲಾ, ಆನ್​ಲೈನ್​ನಲ್ಲಿ ಆರ್ಯುವೇದ ಔಷಧ ಮಾರಾಟ ಮಾಡುತ್ತಿದ್ದರು. ಈ ನಡುವೆ ಫೇಸ್​ಬುಕ್​ನಲ್ಲಿ ಪ್ರಶಾಂತ್ ಮತ್ತು ಚಂದ್ರಕಲಾಗೂ ಸಂಪರ್ಕ ಬೆಳೆದಿತ್ತು. ಇಬ್ಬರು ಸಂಭಾಷಣೆ, ಚಾಟಿಂಗ್​ನಲ್ಲಿ ತೊಡಗಿದ್ದರು. ಇತ್ತೀಚೆಗೆ ತನ್ನ ಮನೆಗೆ ಬರುವಂತೆ ಪ್ರಶಾಂತ್​ಗೆ ಚಂದ್ರಕಲಾ ಆಹ್ವಾನ ನೀಡಿದ್ದಳು. ಅ.6ರಂದು ಬಳ್ಳಾರಿಯಿಂದ ಪ್ರಶಾಂತ್ ಬೆಂಗಳೂರಿಗೆ ಬಂದು ಬೇಗೂರಿಗೆ ಹೋಗಿದ್ದ. ಪ್ರಯಾಣ ಮಾಡಿ ಸುಸ್ತಾಗಿದೆ ಎಂದು ಪಂಚೆ ಧರಿಸಿ ಮಲಗಿದ್ದ. ಆಗ ಚಂದ್ರಕಲಾ, ಮೊಬೈಲ್​ನಲ್ಲಿ ಅರೆಬೆತ್ತಲೆ ವಿಡಿಯೋ- ಫೋಟೋ ತೆಗೆದಿದ್ದಳು.

    ಅರೆಬೆತ್ತಲೆ ಫೋಟೋ-ವಿಡಿಯೋ ತೋರಿಸಿ 10 ಸಾವಿರ ರೂ.ಗೆ ಚಂದ್ರಕಲಾ ಬೇಡಿಕೆ ಒಡ್ಡಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದಾಗ ತಾಯಿ ರಕ್ಷಣೆಗೆ ಮಗಳು ಬಂದಾಗ ಆರೋಪಿ ತಳ್ಳಿದ್ದಾನೆ. ಇದರಿಂದ ಕುಪಿತಗೊಂಡ ಚಂದ್ರಕಲಾ, ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಬಂದು ನನ್ನ ಮಗಳ ಮೇಲೆ ಕೈ ಮಾಡುತ್ತೀಯಾ? ಎಂದು ಹಲ್ಲೆಗೆ ಮುಂದಾಗಿದ್ದಳು. ಮನೆಗೆ ಕರೆಸಿ ಬ್ಲ್ಯಾಕ್​ಮೇಲ್​ ಮಾಡುತ್ತೀಯಾ? ಎಂಬ ಕೋಪಕ್ಕೆ ಅದೇ ಚಾಕುವಿನಲ್ಲಿ ತಾಯಿ ಮತ್ತು ಮಗುವನ್ನು ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಆರೋಪಿ ಹೇಳುತ್ತಿರುವ ಎಲ್ಲ ವಿಚಾರ ನಿಜವೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಡೆತ್​ನೋಟ್​ನಲ್ಲಿ ನಾಲ್ವರ ಹೆಸರು ಬರೆದು ಯುವತಿ ಆತ್ಮಹತ್ಯೆ! ಮದ್ವೆ ಆಗಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

    ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts