More

    ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ

    ಮಂಗಳೂರು: ಮಂಗಳೂರು ಶ್ರೀ ಶಾರದಾ ಮಹೋತ್ಸವ ಸೆ.25ರಿಂದ ಅ.6ರ ವರೆಗೆ ನಡೆಯಲಿದ್ದು, ರಥಬೀದಿ ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆಯನ್ನು ದಾನಿಯೊಬ್ಬರು ನೀಡುತ್ತಿದ್ದಾರೆ.

    ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಈ ಬಾರಿ 100ನೇ ವರ್ಷದ ಶಾರದಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ, ಸಿದ್ಧತೆ ಭರದಿಂದ ಸಾಗುತ್ತಿದೆ. ಶತಮಾನೋತ್ಸವ ವಿಶೇಷವಾಗಿ ಮಂಗಳೂರಿನ ದಾನಿಯೊಬ್ಬರು ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆ ಕೊಡುಗೆಯಾಗಿ ನೀಡುತ್ತಿದ್ದಾರೆ.

    ಈ ಸೀರೆಯನ್ನು ವಾರಣಾಸಿ ಜ್ಞಾನವಾಪಿ ದೇವಾಲಯದ ಬಳಿಯ ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ವಿಶೇಷ. ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್​ ಬಿಸ್ಮಿಲ್ಲಾ ಖಾನ್​ ಪರಿವಾರದವರೇ ಈ ಸೀರೆ ಸಿದ್ಧಗೊಳಿಸಿದ್ದಾರೆ. ಹಲವು ವರ್ಷಗಳಿಂದ ಈ ಕುಟುಂಬವೇ ಶಾರದೆಗೆ ಸೀರೆ ನೇಯ್ದುಕೊಡುತ್ತಿದೆ.

    ಪ್ರತಿವರ್ಷ ಉತ್ಸವದ ಕೊನೇ ದಿನ ಶಾರದೆಗೆ ಬೆಳ್ಳಿ ಜರಿಯ ರೇಷ್ಮೆ ಸೀರೆ ಉಡಿಸಲಾಗುತ್ತಿತ್ತು. ಈ ಬಾರಿ ಚಿನ್ನದ ಸೀರೆಯುಟ್ಟ ಶಾರದಾ ಮಾತೆಯನ್ನು ಭಕ್ತರು ದರ್ಶನ ಮಾಡಬಹುದು. ಮಂಗಳೂರು ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ 12 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

    ಟೆಕ್ಕಿ ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನ ಕದ್ದು ಅಡಗಿದ್ದ ಕಳ್ಳ… ಪತ್ನಿ ಮೇಲಿನ ಪ್ರೀತಿಗೆ ವಾಪಸ್​ ಬಂದು ಪೊಲೀಸರಿಗೆ ಶರಣಾದ

    30 ಎಕರೆ ಭೂಮಿ, 7 ಮನೆ, 11 ಮಕ್ಕಳಿದ್ದರೂ ತಾಯಿಗಿಲ್ಲ ಆಸರೆ… ಕಣ್ಣೀರಿಡುತ್ತಲೇ ದಯಾಮರಣ ಬೇಡಿದ ಹಾವೇರಿಯ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts