ತುಮಕೂರು: ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್ ಕೂಪನ್ ಆಸೆಗಾಗಿ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್ ಎಂಬಾತ ಗಿಫ್ಟ್ ಕಾರ್ಡ್ನ ಸ್ಕ್ರಾಚ್ ಮಾಡಿದ ವೇಳೆ 12.50 ಲಕ್ಷ ರೂ. ನಗದು ಬಹುಮಾನ ಬಂದಿದ್ದು, ಇದನ್ನು ಪಡೆಯುವ ಆಸೆಗೆ ಈವರೆಗೆ 65 ಸಾವಿರ ರೂ. ಕಳೆದುಕೊಂಡಿದ್ದಾರೆ.
ರಂಗನಾಥ್ ಅವರ ಮನೆ ವಿಳಾಸಕ್ಕೆ ಪ್ರತಿಷ್ಠಿತ ಕಂಪನಿಯೊಂದರ ಹೆಸರಲ್ಲಿ ಕೂಪನ್ ಬಂದಿದ್ದು, ನಂತರ ಮೊಬೈಲ್ ಸಂಖ್ಯೆ 9355059216 ನಿಂದ ಕರೆ ಮಾಡಿ ‘ನಿಮಗೆ ಕೂಪನ್ ಮೂಲಕ ಬಂದಿರುವ 12.50 ಲಕ್ಷ ರೂಪಾಯಿ ವರ್ಗಾಯಿಸಲು ಜಿಎಸ್ಟಿ ಹಣ ಪಾವತಿಸಬೇಕು. ಆಗ ನಿಮಗೆ ಹಣ ವರ್ಗಾಯಿಸಲು ಸಾಧ್ಯ’ವೆಂದು ಪುಸಲಾಯಿಸಲಾಗಿದೆ.
ಅದನ್ನು ನಂಬಿ ದೇವನಹಳ್ಳಿಯ ಎಸ್ಬಿಎಂ ಶಾಖೆ ಖಾತೆ ಸಂಖ್ಯೆ 38500334422 ಹಾಗೂ 36049406861 ಗಳಿಗೆ ಹಂತ ಹಂತವಾಗಿ ಒಟ್ಟು 50,000 ರೂಪಾಯಿಯನ್ನು ರಂಗನಾಥ್ ವರ್ಗಾಯಿಸಿದ್ದಾರೆ. ಆ ಬಳಿಕ 15,000 ರೂಪಾಯಿಯನ್ನು ಯುಪಿಐ ಟ್ರಾನ್ಸ್ಫರ್ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಂಚಕರು, ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ರಂಗನಾಥ್ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗಿದೆ.
ಬಿಡದಿಯಲ್ಲಿ ನಕಲಿ ಮೊಮ್ಮಗಳನ್ನು ಬ್ಯಾಂಕ್ಗೆ ಕರೆತಂದು 5 ಲಕ್ಷ ರೂ. ಕಬಳಿಸಿದ ದಂಪತಿ! ಇಂಥವರೂ ಇರ್ತಾರೆ ಹುಷಾರ್!
ಆಷಾಢ ಹಿನ್ನೆಲೆ ತವರಿಗೆ ಬಂದಾಕೆ ದುರಂತ ಅಂತ್ಯ: ಆ ಒಂದು ತಿಂಗಳಲ್ಲಿ ಆಗಬಾರದ್ದೆಲ್ಲಾ ಆಗಿ ಹೋಯ್ತು…
ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ