More

    ಮತ್ತೇರುವ ಮಾತ್ರೆಗಳನ್ನು ಕೊಡಿಸದ ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಗೆಳೆಯರು

    ಬೆಂಗಳೂರು: ಮಾದಕವ್ಯಸನಕ್ಕೆ ಒಳಗಾಗಿದ್ದ ಯುವಕರು, ಮತ್ತೇರುವ ಮಾತ್ರೆಗಳನ್ನು ಕೊಡಿಸದ ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಬಸವೇಶ್ವರ ಲೇಔಟ್ ನಿವಾಸಿ ಕಾರ್ತಿಕ್ ಹಲ್ಲೆಗೊಳಗಾದ ಯುವಕ. ಗಾಯಾಳು ಕೊಟ್ಟ ದೂರಿನ ಅನ್ವಯ ಗೋವಿಂದರಾಜ ನಗರದ ಭುವನ್, ಮನೋಜ್ (19) ಮತ್ತು ಆಕಾಶ್ (19) ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಕಾರ್ತಿಕ್ ಏ.20ರಂದು ದಾಸರಹಳ್ಳಿಯಲ್ಲಿ ರುವ ಸಂಬಂಧಿಕರ ಮನೆಗೆ ಹೋಗಿದ್ದ. ಈತನಿಗೆ ಕರೆ ಮಾಡಿದ್ದ ಭುವನ್, ಮಾಗಡಿ ರಸ್ತೆಯ ರಹೇಜಾ ಪಾರ್ಕ್ ಬಳಿ ಬರುವಂತೆ ಸೂಚಿಸಿದ್ದ. ಕಾರ್ತಿಕ್ ದಾಸರಹಳ್ಳಿಯಿಂದ ಬೈಕ್​ನಲ್ಲಿ ಸಂಜೆ 4 ಗಂಟೆಗೆ ರಹೇಜಾ ಪಾರ್ಕ್​ಗೆ ಹೋಗಿದ್ದ. ಸೇಟು ಕಾಂಪೌಂಡ್ ಸಮೀಪದ ರಾಯಲ್ ಬಾರ್ ಬಳಿ ಕರೆದೊಯ್ದಿದ್ದರು.

    ಮಾತ್ರೆ ಕೊಡಿಸುವಂತೆ ಕಿರಿಕ್: ನಿನ್ನೆ ಕೊಡಿಸಿದ್ದ ಮಾತ್ರೆ ಕೊಡಿಸು ಎಂದು ಕಾರ್ತಿಕ್​ಗೆ ಭುವನ್ ಬೇಡಿಕೆ ಇಟ್ಟಿದ್ದ. ಆಗ ಕಾರ್ತಿಕ್ ಆಗುವುದಿಲ್ಲ ಎಂದು ಹೇಳಿದ್ದಾನೆ. ಆಕ್ರೋಶಗೊಂಡ ಭುವನ್ ಮತ್ತು ಜತೆಗಿದ್ದ ವರು ಥಳಿಸಿದ್ದಾರೆ. ಮನೋಜ್ ಎಂಬಾತ ಚಾಕು ತೆಗೆದು ಹಲ್ಲೆ ನಡೆಸಿದ್ದಾನೆ. ಭುವನ್ ಸಹ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಕಾರ್ತಿಕ್​ನ ಬಲಗೈ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಂಜಾ ವ್ಯಸನಿಗಳು

    ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದಾರೆ. ಭುವನ್ ಎಂಬುವನು ಈ ಹಿಂದೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಘಟನೆಗೂ ಹಿಂದಿನ ದಿನ ಮತ್ತೇರುವ ಮಾತ್ರೆಗಳನ್ನು ಕಾರ್ತಿಕ್​ನಿಂದ ತೆಗೆದುಕೊಂಡಿದ್ದಾರೆ. ಮರುದಿನವೂ ಆ ಮಾತ್ರೆಗಳನ್ನು ಕೊಡಿ ಸುವಂತೆ ಕಾರ್ತಿಕ್​ಗೆ ದುಂಬಾಲು ಬಿದ್ದಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ಆಕ್ರೋಶದಲ್ಲಿ ಹಲ್ಲೆ ಮಾಡಿದ್ದಾರೆ. ಈ ಕುರಿತು ದೂರು ಕೊಡಲು ಕಾರ್ತಿಕ್ ಹಿಂದೇಟು ಹಾಕಿದ್ದ. ಪಾಲಕರು ಒತ್ತಾಯಿಸಿ ದೂರು ಕೊಡಿಸಿದ್ದಾರೆ. ಭುವನ್ ವಿರುದ್ಧ ರೌಡಿ ಪಟ್ಟಿ ತೆರೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಮಹಿಳೆಯ ಬರ್ಬರ ಹತ್ಯೆ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts