More

    ಅಯ್ಯನಗುಡಿ ಜಾತ್ರೆ ಮೇಲೆ ಕರೊನಾ ಛಾಯೆ: ಐತಿಹಾಸಿಕ ಕೆಂಗಲ್​ ದನಗಳ ಜಾತ್ರೆ ರದ್ದು

    ಚನ್ನಪಟ್ಟಣ: ಕರೊನಾ ಹಿನ್ನೆಲೆಯಲ್ಲಿ ಈ ವರ್ಷವೂ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಕೆಂಗಲ್​ ಆಂಜನೇಯ ಸ್ವಾಮಿ ದನಗಳ ಜಾತ್ರೆ (ಅಯ್ಯನಗುಡಿ ಜಾತ್ರೆ) ರದ್ದಾಗಿದೆ. ಇದರೊಂದಿಗೆ ಐತಿಹಾಸಿಕ ಹಾಗೂ ವರ್ಷದ ಮೊದಲ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದ ಕೆಂಗಲ್​ ಜಾತ್ರೆ ಕರೊನಾ ಮೂರನೇ ಅಲೆ ಭೀತಿಗೆ ಬಲಿಯಾಗಿದೆ.

    ಕೋವಿಡ್​ ಹರಡುವಿಕೆ ತಡೆಯಲು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ದೇವಾಲಯಗಳ ಜಾತ್ರೆ, ಉತ್ಸವ ರದ್ದುಗೊಳಿಸಿದೆ. ಇದರಿಂದಾಗಿ ದನಗಳ ಜಾತ್ರೆಗೆ ಸಹ ಜಿಲ್ಲಾಡಳಿತ ತಡೆ ಹಾಕಿದೆ. ಕೆಂಗಲ್​ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಈ ಜಾತ್ರೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದ ಆರಂಭಗೊಳ್ಳಬೇಕಿತ್ತು. ಆದರೆ, ಈ ವರ್ಷವೂ ಜಾತ್ರೆ ಹಾಗೂ ಅದ್ದೂರಿ ರಥೋತ್ಸವಕ್ಕೆ ಬ್ರೇಕ್​ ಹಾಕಿದ್ದು, ಜಾತ್ರೆ ಜತೆಗೆ ಭಕ್ತರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ರಥೋತ್ಸವ ಸೇರಿ ಧಾರ್ಮಿಕ ವಿಧಿವಿಧಾನಗಳು ಸಾಂಕೇತಿಕವಾಗಿ ನಡೆಯಲಿವೆ. ಈ ಜಾತ್ರೆಗೆ ರಾಮನಗರ ಜಿಲ್ಲೆಯ ರೈತರು ಮಾತ್ರವಲ್ಲದೆ ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಂದಲೂ ರೈತರು ಆಗಮಿಸಿ ರಾಸುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ದನಗಳ ಜಾತ್ರೆ ರದ್ದಾಗಿರುವುದರಿಂದ ಈ ಬಾರಿ ರಾಸುಗಳ ಗೊರಸಿನ ಸಪ್ಪಳ ಕೇಳದಂತಾಗಿದೆ.

    ಮೇಕೆದಾಟು ಪಾದಯಾತ್ರೆ ತಡೆಗೆ ಪಿಐಎಲ್​: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹಿಗ್ಗಾಮುಗ್ಗಾ ತರಾಟೆ

    ಕರುಳ ಕುಡಿಯನ್ನೇ ಕೊಚ್ಚಿ ಕೊಂದ ತಾಯಿ! ಆಕೆ ಮೈಮೇಲೆ ದೇವರು ಬರುತ್ತಿತ್ತಂತೆ… ಮೈಸೂರು ಜಿಲ್ಲೇಲಿ ಅಮಾನವೀಯ ಘಟನೆ

    ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್​ ಗ್ರೂಪ್​ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts