More

    ಜಿಲ್ಲಾಧಿಕಾರಿ-ಡಿಎಚ್​ಒಗೆ ಸಿಎಂ ಹಿಗ್ಗಾಮುಗ್ಗಾ ತರಾಟೆ! ಬೊಮ್ಮಾಯಿ ಕೋಪ ಕಂಡು ಸುಮ್ಮನೆ ಕುಳಿತ ಡಿಸಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭೆಯಲ್ಲೇ ಜಿಲ್ಲಾಧಿಕಾರಿ ಮತ್ತು ಡಿಎಚ್​ಒ ವಿರುದ್ಧ ಗರಂ ಆದರು. ಸಿಎಂ ಕೋಪ ಕಂಡು ಜಿಲ್ಲಾಧಿಕಾರಿ ಸುಮ್ಮನೆ ಕುಳಿತು ಬಿಟ್ಟರು!

    ಕೋವಿಡ್​ ನಿಯಂತ್ರಣಕ್ಕೆ ಜಿಲ್ಲಾಡಳಿತ ಮಾಡಿಕೊಂಡಿದ್ದ ಸಿದ್ಧತೆ ಕುರಿತು ಸಿಎಂಗೆ ಮಾಹಿತಿ ನೀಡುತ್ತಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ‘ಮಾಸ್ಕ್​ ಮತ್ತು ಗ್ಲೌಸ್​ ಕೊರತೆ ಇದೆ’ ಎಂದರು. ಇದಕ್ಕೆ ಸಿಟ್ಟಾದ ಸಿಎಂ, ‘ಮಾಸ್ಕ್-ಗ್ಲೌಸ್​ ಇಲ್ಲ ಇಲ್ಲದೆ ಹೇಗೆ ಆಡಳಿತ ನಡೆಸ್ತೀರಿ? ನಿಮ್ಮ ಬಳಿ ಎಸ್​ಡಿಆರ್​ಎಫ್​ ಫಂಡ್​ ಇದೆ, ಲೋಕಲ್​ನಲ್ಲೇ ಖರೀದಿಸಿ. ನಿಮಗೆ ಹಣ ಕೊಟ್ಟರೂ ಏಕೆ ಇನ್ನೂ ಖರೀದಿಸಿಲ್ಲ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಜಿಲ್ಲಾಧಿಕಾರಿ ಯತ್ನಿಸುತ್ತಿದ್ದಂತೆ ‘ನೋ’ ಎಂದು ಕೂಗಿದ ಬೊಮ್ಮಾಯಿ, ‘ಆರೋಗ್ಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕೊಡುವಷ್ಟು ಕಾಮನ್​ ಸೆನ್ಸ್​ ಇಲ್ವಾ ನಿಮ್ಗೆ?’ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಡಿಎಚ್​​ಒ ಅವರಿಗೂ ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡ ಸಿಎಂ, ‘ನೀನೇನ್​ ನಿದ್ದೆ ಮಾಡ್ತೀಯೇನಪ್ಪಾ? ಡಿಸಿ ಅವರ ಗಮನಕ್ಕೆ ಅಡ್ವಾನ್ಸ್​ ಆಗಿ ತರೋಕೆ ಆಗಲ್ವಾ ? ಮಾಸ್ಕ್​ ಎಷ್ಟಿದೆ, ಇನ್ನೂ ಎಷ್ಟು ಬೇಕಿದೆ ಎಂದು ಗೊತ್ತಾಗಲ್ವಾ? ಮಾಡೋಕೆ ಮನಸಿಲ್ಲ ನಿನಗೆ…’ ಎಂದು ಹರಿಹಾಯ್ದರು.

    ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಡಾ.ಕೆ. ಸುಧಾಕರ್, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಯು.ಟಿ.ಖಾದರ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ವೈ, ಹರೀಶ್ ಪೂಂಜ, ಸಂಜೀವ ಮಠಂದೂರು, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಉಪಸ್ಥಿತರಿದ್ದರು.

    ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

    ಪರಪುರುಷನೊಂದಿಗೆ ಓಡಿಹೋದ ಪತ್ನಿ! ಸತ್ವ ಪರೀಕ್ಷೆ ನೆಪದಲ್ಲಿ ಅತ್ತೆ-ಮಾವನಿಗೆ ಮಾಡಬಾರದ್ದು ಮಾಡಿಬಿಟ್ಟ ಅಳಿಯ

    ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

    ಯುವತಿ ಜತೆ ನನ್ನ ಗಂಡನಿಗಿದೆ ಅಕ್ರಮ ಸಂಬಂಧ! ಪತ್ನಿ ಮತ್ತು ಆಕೆ ನಡುವೆ ಜಾಲತಾಣದಲ್ಲೇ ನಡೀತು ವಾರ್​, ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts