More

    ಪೊಲೀಸರು ಅಪಘಾತ ಸ್ಥಳಕ್ಕೆ ಹೋದಾಗ ಚಿದಾನಂದ ಸವದಿ ಸ್ಥಳದಲ್ಲೇ ಇದ್ದರು: ಬಾಗಲಕೋಟೆ ಎಸ್​​ಪಿ

    ಬಾಗಲಕೋಟೆ: ಡಿಸಿಎಂ ಲಕ್ಷಣ ಸವದಿ ಪುತ್ರನ ಕಾರು ಅಪಘಾತ, ರೈತನೊಬ್ಬನ ಸಾವು ಪ್ರಕರಣದ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಸುದ್ದಿಗೋಷ್ಠಿ ನಡೆಸಿ ಹಲವು ಮಾಹಿತಿ ನೀಡಿದ್ದಾರೆ.

    ಅಪಘತಾದಲ್ಲಿ ಮೃತಪಟ್ಟ ಕೂಡ್ಲೆಪ್ಪ ಬೋಳಿ(58)ಯ ಮರಣೋತ್ತರ ಪರೀಕ್ಷೆ ಕುಮಾರೇಶ್ವರ ಆಸ್ಪತ್ರೆಯ ಶವಗಾರದಲ್ಲಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದ್ದು, ಮೃತನ ಸ್ವಗ್ರಾಮ ಚಿಕ್ಕಹಂಡರಗಲ್​ಗೆ ರವಾನಿಸಲಾಗಿದೆ. ಇನ್ನು ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕಾರು ಮಾಲೀಕ ಚಿದಾನಂದ ಸವದಿ ಮತ್ತು ಕಾರು ಚಾಲಕ ಹಾಗೂ ಮತ್ತಿಬ್ಬರು ಇದ್ದರು. ಕುಡಿದು ಚಾಲನೆ ಮಾಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಈ ಬಗ್ಗೆ ಮೆಡಿಕಲ್ ಚೆಕ್ ಆಗಿದೆ ಎಂದರು.

    ಪ್ರತ್ಯಕ್ಷದರ್ಶಿಗಳಿಂದ ವಿಡಿಯೋ ಸ್ಟೇಟ್ ಮೆಂಟ್ ಪ್ರಕಾರ ದೂರು ದಾಖಲಾಗಿದೆ. ಪ್ರಕರಣ ಮುಚ್ಚಿಹಾಕುವ ಯಾವುದೇ ಪ್ರಯತ್ನ ನಡೆದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಒಟ್ಟಾರೆ, ಇಡೀ ಪ್ರಕರಣ ತನಿಖೆ ನಡೆಸಲಾಗುತ್ತಿದೆ. ಯಾರೆಲ್ಲ ಇದ್ರು? ಅಪಘಾತಕ್ಕೆ ಕಾರಣ ಏನು? ಎಂಬ ಆಯಾಮದಲ್ಲಿ ಕಾರು ಚಾಲಕ ಹನಮಂತ ರಜಪೂತನ ವಿಚಾರಣೆ ನಡೆಯುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ಡಿಸಿಎಂ ಪುತ್ರ ಚಿದಾನಂದ ಇದ್ದಿದ್ದು ಸತ್ಯ ಎಂದು ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

    ಪೊಲೀಸರು ಅಪಘಾತ ಸ್ಥಳಕ್ಕೆ ಹೋದಾಗ ಚಿದಾನಂದ ಸವದಿ ಸ್ಥಳದಲ್ಲೇ ಇದ್ದರು: ಬಾಗಲಕೋಟೆ ಎಸ್​​ಪಿ

    ಅನುಮಾನ ಮೂಡಿಸುತ್ತೆ ಸವದಿ ಪುತ್ರನ ಹೇಳಿಕೆ: ನನ್ನ ಕಾರು ಅಪಘಾತಕ್ಕೀಡಾದ ವೇಳೆ ನಾನು ಆ ಕಾರಿನಲ್ಲಿಯೇ ಇರಲಿಲ್ಲ. ದೇವರಾಣೆ ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲ ಸುಳ್ಳು… ಎಂದು ಚಿದಾನಂದ ಸವದಿ ಹೇಳಿದ್ದಾರೆ. ನಾನು ಮತ್ತು ನಮ್ಮ ಸ್ನೇಹಿತರು ಎರಡು ಕಾರಿನಲ್ಲಿ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಹೋಗಿದ್ವಿ. ನನ್ನ ಕಾರಿನಲ್ಲಿ ನನ್ನ ಸ್ನೇಹಿತರು ಮತ್ತು ಡ್ರೈವರ್ ಬರುವ ಸಮಯದಲ್ಲಿ ಅಪಘಾತವಾಗಿದೆ. ನಾನಿದ್ದ ಕಾರಿಗೂ ಮತ್ತು ಅಪಘಾತವಾದ ಕಾರಿಗೂ 3೦ಕಿಮೀ ಅಂತರವಿತ್ತು. ಡ್ರೈವರ್ ನನಗೆ ಫೋನ್ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ನೀಡಿದ. ಕೂಡಲೇ ನಾನು ಫೋನ್ ಮಾಡಿ ಆಂಬುಲೆನ್ಸ್ ತರಿಸಿ ಬಾಗಲಕೋಟೆ ಎಸ್ಪಿ, ಡಿವೈಎಸ್ಪಿ, ಸಿಪಿಐಗೆ ಮಾಹಿತಿ ನೀಡಿದೆ. ನಾನು ರಿಟರ್ನ್​ ಬರುವಷ್ಟರಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದಿದ್ದರು. ಇತ್ತ ಎಸ್ಪಿ ಅವರು ಪೊಲೀಸರು ಸ್ಥಳಕ್ಕೆ ಹೋದಾಗ ಚಿದಾನಂದ ಸವದಿ ಅಲ್ಲಿಯೇ ಇದ್ದರು ಎಂದಿದ್ದಾರೆ.

    ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

    ಅಪಘಾತಕ್ಕೀಡಾದ ಕಾರಿನಲ್ಲಿ ನಾನು ಇರಲೇ ಇಲ್ಲ… ದೇವರಾಣೆ ನನ್ನ ವಿರುದ್ಧದ ಆರೋಪವೇ ಸುಳ್ಳು: ಲಕ್ಷ್ಮಣ ಸವದಿ ಪುತ್ರ

    ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

    ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts