More

    ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಕೇಸು

    ಕಾರ್ಕಳ: ಸಾಣೂರು ಶುಂಠಿಗುಡ್ಡೆ ಎಂಬಲ್ಲಿ ಕೇರಳ ಮೂಲಕ ಕಾರ್ಮಿಕರೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದೆ. ಪತಿ ಕೆಲಸ ಮಾಡುತ್ತಿದ್ದ ರಬ್ಬರ್ ಪ್ಲಾಂಟೇಶನ್ ಮಾಲೀಕರು ಮಾನಸಿಕ ಹಿಂಸೆ ನೀಡಿ ಪತಿಯ ಸಾವಿಗೆ ಕಾರಣವಾಗಿದ್ದಾರೆ ಎಂದು ಮೃತರ ಪತ್ನಿ ನಗರ ಠಾಣೆಗೆ ದೂರು ನೀಡಿದ್ದು, ಇಬ್ಬರ ವಿರುದ್ಧ ಕೇಸು ದಾಖಲಾಗಿದೆ.

    ಕೇರಳದ ಮಲಪುರಂ ಎಡಕ್ಕಾರ್ ಮೋತೆಡಮ್ ನಿವಾಸಿ ಟಿ.ಕೆ.ಗೋಪಿನಾಥನ್ ಮೃತರು. ಸಾಣೂರು ಗ್ರಾಮದ ಶುಂಟಿಗುಡ್ಡೆಯಲ್ಲಿ ರಬ್ಬರ್ ಪ್ಲಾಂಟೇಷನ್‌ನಲ್ಲಿ ಟ್ಯಾಪರ್ ಕೆಲಸಕ್ಕೆ ಮಾಡುತ್ತಿದ್ದು, ಅದೇ ಪ್ಲಾಂಟೇಶನ್‌ನ ಗುಡಿಸಲಿನಲ್ಲಿ ಒಂಟಿಯಾಗಿ ವಾಸವಿದ್ದರು. ಅ.19ರಂದು ನಾಪತ್ತೆಯಾಗಿದ್ದ ಅವರ ಮೃತದೇಹ ಅವರು ಕೆಲಸ ಮಾಡುತ್ತಿದ್ದ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಇದೀಗ ಗೋಪಿನಾಥನ್ ಅವರ ಪತ್ನಿ ಸುಧಾ ಕೆ.ಎಸ್ ದೂರು ನೀಡಿದ್ದಾರೆ. ಪ್ಲಾಂಟೇಶನ್ ಮಾಲೀಕರು ಪತಿಗೆ ಸರಿಯಾಗಿ ಸಂಬಳ, ರಜೆ ನೀಡದೆ ತೊಂದರೆ ಕೊಡುತ್ತಿದ್ದರು. ಕೆಲಸ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು. ಪತಿ ಫೋನ್ ಮಾಡಿದಾಗ, ‘ಮಾಲೀಕರ ಕಿರುಕುಳದಿಂದ ಎಲ್ಲರೂ ಕೆಲಸ ಬಿಟ್ಟು ಹೋಗಿದ್ದು, ನಾನಿಲ್ಲಿ ಒಬ್ಬನೇ ಇದ್ದೇನೆ. 2-3 ಮೊಬೈಲ್ ನಂಬರ್‌ಗಳನ್ನು ಕಳುಹಿಸುತ್ತೇನೆ. ನಾನು ಫೋನ್ ಕರೆ ಸ್ವೀಕರಿಸದಿದ್ದರೆ, ಆ ನಂಬರ್‌ಗಳನ್ನು ಪೊಲೀಸರಿಗೆ ನೀಡುವಂತೆ ತಿಳಿಸಿದ್ದರು’ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಅವರು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts