ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇಣದ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ಗೊಲ್ಲರಹಟ್ಟಿಯ ನಾಗರಾಜ್ ಪತ್ನಿ ಮಂಗಳಮ್ಮ ಹೆರಿಗೆಗೆ ದಾಖಲಾಗಿದ್ದರು. ಹೆರಿಗೆ ವಾರ್ಡ್ ಶಿಥಿಲಗೊಂಡಿದ್ದು, ಮಳೆ ನೀರು ಸೋರುವ ಆತಂಕದಲ್ಲಿ ವಾರ್ಡ್ನ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ರಾತ್ರಿ ಪಾಳಿಯಲ್ಲಿ ವೈದ್ಯರು ಇಲ್ಲದೇ ಇರುವುದರಿಂದ ಕೊನೆಗೆ ದಾದಿಯರೇ ಮೇಣದ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಲು ಮುಂದಾದಾಗ ಹಲವರು ಮೊಬೈಲ್ ಟಾರ್ಚ್ ಬೆಳಕು ಹಾಕಿದ್ದು, ಹೆರಿಗೆ ಸುಸೂತ್ರವಾಗಿ ನಡೆದಿದೆ.
ಇಲಾಖೆ ನಿಗದಿ ಮಾಡಿರುವುದಕ್ಕಿಂತಲೂ ಹೆಚ್ಚಿನ ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಆಸ್ಪತ್ರೆಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಬೇಕಿದೆ. ಸಮಸ್ಯೆ ಬಗ್ಗೆ ಶಾಸಕರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರ ಒತ್ತಾಯಿಸಿದ್ದಾರೆ.
ಮಳೆಯಿರುವ ಹಿನ್ನೆಲೆಯಲ್ಲಿ ವಿದ್ಯುತ್ ಡಿಪ್ ಆಗಿದೆ, ಜನರೇಟರ್ ದುರಸ್ಥಿಯಲ್ಲಿರಬಹುದು. ತನಿಖೆ ನಡೆಸುತ್ತೇನೆ, ಆಸ್ಪತ್ರೆ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ.
|ಡಾ.ನಾಗೇಂದ್ರಪ್ಪ ಜಿಲ್ಲಾ ವೈದ್ಯಾಧಿಕಾರಿ
ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ…
ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ
ನನ್ನನ್ನು ಸಾಯಿಸಿ ಬಿಡ್ತಾರೆ ಬೇಗ ಬಾ.. ಎಂದು ಕಣ್ಣೀರಿಟ್ಟ ಪ್ರಿಯಕರ, ಆಕೆ ಬರುವಷ್ಟರಲ್ಲಿ ಶವವೂ ಇರಲಿಲ್ಲ…