More

    ಅಯ್ಯೋ ಮಗಳೇ, ಹುಟ್ಟುಹಬ್ಬಕ್ಕೂ ಮುನ್ನಾ ದಿನವೇ ಇದೆಂಥಾ ನೋವು ಕೊಟ್ಟುಬಿಟ್ಟೆ…

    ಬೆಂಗಳೂರು: ಅಯ್ಯೋ ಮಗಳೇ… ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಇದೆಂಥಾ ಶಿಕ್ಷೆ ಕೊಟ್ಟು ಬಿಟ್ಟವ್ವಾ… ನಮ್ಮನ್ನೇ ಬಿಟ್ಟು ಬಾರದ ಲೋಕಕ್ಕೆ ಹೋಗಿಬಿಟ್ಟಲ್ಲೇ… ಇದು ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಮುಗಿಲು ಮುಟ್ಟಿದ್ದ ಪಾಲಕರ ಆಕ್ರಂದನ.

    ಬಳ್ಳಾರಿ ಜಿಲ್ಲೆ ಶಿರಗುಪ್ಪ ಮೂಲದ ಸಂಜೀವಪ್ಪ ಎಂಬುವರ ಪುತ್ರಿ ನಾಗವೇಣಿ ಮೃತಳು. ಸಂಜೀವಪ್ಪ ಕೆಲ ವರ್ಷಗಳ ಹಿಂದೆ ಪತ್ನಿ, ಮಕ್ಕಳ ಜತೆ ಬೆಂಗಳೂರಿಗೆ ಬಂದು ಸಹಕಾರನಗರದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆ ನೆಲೆಸಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

    ನಾಗವೇಣಿ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆ.2ಕ್ಕೆ ಯುವತಿ ಹುಟ್ಟುಹಬ್ಬವಿತ್ತು. ಒಂದು ವಾರದಿಂದ ಹೊಸ ಬಟ್ಟೆ ಕೊಡಿಸುವಂತೆ ಪಾಲಕರನ್ನು ಒತ್ತಾಯ ಮಾಡುತ್ತಿದ್ದಳು. ಅವರು ಹೆಚ್ಚು ಗಮನ ಕೊಟ್ಟಿರಲಿಲ್ಲ. ಭಾನುವಾರ ಸಹ ಹೊಸ ಬಟ್ಟೆ ಬೇಕೆಂದು ದುಂಬಾಲು ಬಿದ್ದಿದ್ದಳು. ಪಾಲಕರು ಗಂಭೀರವಾಗಿ ಪರಿಗಣಿಸದೆ ಕೆಲಸಕ್ಕೆ ಹೋಗಿದ್ದರು. ಬೇಸರಗೊಂಡ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ಪಾಲಕರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    https://www.vijayavani.net/a-naxals-came-back-to-wayanad/‘

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts