ಬೆಂಗಳೂರು: ವ್ಯಕ್ತಿಯೊಬ್ಬ 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ.
ನಗರದಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಎಸಗುವ ಕೃತ್ಯ ನಡೆದಿದ್ದು, ಕೇವಲ 8 ಸೆಕೆಂಡ್ನಲ್ಲಿ ಖದೀಮರು ಲಕ್ಷ..ಲಕ್ಷ ಹಣ ಎಗರರಿಸಿದ್ದಾರೆ. ಬ್ಯಾಂಕ್ಗಳಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವ ಜನರು ಈ ಬಗ್ಗೆ ಎಚ್ಚರವಹಿಸಬೇಕಿದೆ.
ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕ್ಯಾಷಿಯರ್ ಆಗಿರುವ ರಾಜಶೇಖರ್ ಹಣ ಕಳೆದುಕೊಂಡ ವ್ಯಕ್ತಿ. ಕಂಪನಿಗೆ ಹಣದ ಅವಶ್ಯಕತೆ ಹಿನ್ನೆಲೆ ಬೆಳಗ್ಗೆ ಹಣ ಡ್ರಾ ಮಾಡಿಕೊಳ್ಳಲು ರಾಜಶೇಖರ್ ಬಂದಿದ್ದರು. ಜನತಾ ಕೋ ಆಪರೇಟಿವ್ ಬ್ಯಾಂಕ್ನಿಂದ 3 ಲಕ್ಷ ನಗದು ಹಿಂಪಡೆದು, ಬ್ಯಾಂಕ್ನಿಂದ ಹೊರಬಂದು, ಬೈಕ್ ಮೇಲೆ ಹಣದ ಬ್ಯಾಗ್ ಇಟ್ಟು ಜರ್ಕಿನ್ ಹಾಕಿಕೊಳ್ಳುತ್ತಿದ್ದರು.
ಈ ವೇಳೆ ಓರ್ವ ವ್ಯಕ್ತಿ ಬಂದು ನಿಮ್ಮ ಹಣ ಬಿದ್ದಿದೆ ಎಂದು ರಾಜಶೇಖರ್ಗೆ ಹೇಳಿದ. ಹಣ ಎತ್ತಿಕೊಳ್ಳಲು ರಾಜಶೇಖರ್ ಹೋದಾಗ ಇತ್ತ ಮತ್ತೊಬ್ಬ ವ್ಯಕ್ತಿ ಬಂದು ಹಣವಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಬೈಕಿನ ಬಳಿ ಬಂದ ರಾಜಶೇಖರ್ ಬ್ಯಾಗ್ ಇಲ್ಲದಿರುವುದನ್ನು ನೋಡಿ ತಬ್ಬಿಬ್ಬಾದರು.
ಕೇವಲ 150 ರೂಪಾಯಿ ಆಸೆಗೆ ರಾಜಶೇಖರ್ 3 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟೋರಿಯಸ್ ಗ್ಯಾಂಗ್ ಪತ್ತೆಗೆ ಉತ್ತರ ವಿಭಾಗ ಪೊಲೀಸರಿಂದ ವಿಶೇಷ ತಂಡಗಳ ರಚನೆಯಾಗಿದೆ. (ದಿಗ್ವಿಜಯ ನ್ಯೂಸ್)
ಬೆಂಗಳೂರು: ವ್ಯಕ್ತಿಯೊಬ್ಬ 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ.#Theft #Bank #Money #Stole pic.twitter.com/xqyY7RJxsq
— Vijayavani (@VVani4U) November 29, 2020
ಇಲ್ಲಿದೆ ನೋಡಿ ಫೋಟೋ ಅಸಲಿಯತ್ತು! ಭಾರತ ಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎನಿಸಿಕೊಂಡವರಾರು?