ಗುರುಗ್ರಾಮ: ಇನ್ನೇನು ಕೆಲ ದಿನಗಳಲ್ಲಿ ಹಸೆ ಮಣೆ ಏರಿ, ಹೊಸ ಬದುಕನ್ನು ಆರಂಭಿಸಬೇಕಿದ್ದ ಯುವತಿಯೊಬ್ಬಳು ಬಾವಿ ಪತಿಯ ಎದುರೇ ಹೆಣವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
26 ವರ್ಷದ ಟೆಕ್ಕಿ ಪೂಜ ಶರ್ಮಾ ಮತ್ತು ಸಾಗರ್ ಮಂಚಂದಗೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 3ರಂದು ರೆಸ್ಟೋರೆಂಟ್ನಲ್ಲಿ ಊಟ ಮಾಡಿದ ಬಾವಿ ದಂಪತಿ, ಹಾಗೆ ಒಂದು ಡ್ರೈವ್ ಹೋಗೋಣ ಎಂದು ಹೊರಟಿದ್ದಾರೆ. ಪೂಜ ತಾನೇ ಕಾರು ಡ್ರೈವಿಂಗ್ ಮಾಡಿಕೊಂಡು ಹೊರಟಿದ್ದಾಳೆ. ಆದರೆ ಮಾರ್ಗ ಮಧ್ಯೆ ಇವರನ್ನು ಅಡ್ಡ ಹಾಕಿದ ದುಷ್ಕರ್ಮಿಗಳು ಪೂಜಳ ಬದುಕನ್ನೇ ಕೊನೆಗಾಣಿಸಿದ್ದಾರೆ.
ಇದನ್ನೂ ಓದಿ: ಸೆಕ್ಸ್ ಬಿಟ್ಟರೆ ಕಿಯಾರಾಗೆ ಏನಿಷ್ಟ!?; ಅಭಿಮಾನಿಯ ಪ್ರಶ್ನೆಗೆ ನಟಿಯ ಉತ್ತರ ಹೀಗಿದೆ
“ಮೂರು ಜನರು ಬೈಕ್ನಲ್ಲಿ ಬಂದು ನಮ್ಮ ಕಾರನ್ನು ಅಡ್ಡಗಟ್ಟಿದರು. ಅದರಲ್ಲಿ ಇಬ್ಬರು ಬೈಕ್ನಿಂದ ಕೆಳಗಿಳಿದು ನನ್ನ ಮತ್ತು ಪೂಜಾ ಬಳಿ ಬಂದರು. ಕಾರ್ನ ವಿಂಡೋ ಗ್ಲಾಸ್ ಇಳಿಸುವಂತೆ ಸನ್ನೆ ಮಾಡಿದರು. ಅವರಲ್ಲಿ ಒಬ್ಬ ಕಾರಿನ ಮುಂದೆ ಬಂದು ಗುಂಡು ಹಾರಿಸಿದ. ಹೆದರಿ, ತಪ್ಪಿಸಿಕೊಳ್ಳುವ ಸಲುವಾಗಿ ಪೂಜ ಕಾರನ್ನು ಮೂವ್ ಮಾಡಲು ನೋಡಿದಳು. ಆಗ ಆಕೆಯ ಬಳಿ ಇದ್ದ ವ್ಯಕ್ತಿ ಅವಳ ಮೇಲೆ ಗುಂಡು ಹಾರಿಸಿದ. ಅದು ನೇರವಾಗಿ ಅವಳ ತಲೆಗೆ ತಗುಲಿತು” ಎಂದು ಸಾಗರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೀಚ್ನಲ್ಲಿ ಬೆತ್ತಲಾಗಿ ಓಡಾಡಿದ ನಟ ಮಿಲಿಂದ್ ಸೋಮನ್
ಗಂಭೀರವಾಗಿ ಗಾಯಾಳುವಾಗಿದ್ದ ಪೂಜಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಗುರುವಾರ ಅಸು ನೀಗಿದ್ದಾಳೆ. (ಏಜೆನ್ಸೀಸ್)
ಮಸೀದಿಯಲ್ಲಿ ಹೋಮ ಮಾಡುತ್ತೇವೆ! ವಿವಾದಾತ್ಮಕ ಹೇಳಿಕೆ ಹಿಂಪಡೆದ ವಿಎಚ್ಪಿ ನಾಯಕಿ
ಬಾತ್ರೂಂನಲ್ಲಿ ಪತ್ನಿಯ ನಗ್ನ ಚಿತ್ರ ತೆಗೆದು, ಆಕೆಗೇ ಬ್ಲಾಕ್ಮೇಲ್ ಮಾಡಿದ ಗಂಡ!