ಜೈಪುರ/ನವದೆಹಲಿ: ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವಂತೆ ಕಾಂಗ್ರೆಸ್ ಮುಖಂಡರ ಸಂಕಷ್ಟಗಳು ಒಂದೊಂದಾಗಿ ಹೆಚ್ಚಾಗುತ್ತಿದೆ. ದೆಹಲಿ ಮತ್ತು ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ವಿದೇಶಿ ವ್ಯವಹಾರಗಳ ಕುರಿತು ತನಿಖೆ ಆರಂಭಿಸಿದ್ದಾರೆ.
ಅಂದಾಜು 200ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆವರ ಆಪ್ತರೊಬ್ಬರ ಮನೆಯ ಮೇಲೆ ಸೋಮವಾರ ಬೆಳಗ್ಗೆ ದಾಳಿ ಮಾಡಿದ್ದಾರೆ. ಧರ್ಮೇಂದರ್ ರಾಥೋಡ್ ಎಂಬುವರ ಮನೆ ಮೇಲೆ ಮುಗಿಬಿದ್ದಿರುವ ಅಧಿಕಾರಿಗಳು ದಾಖಲೆಗಳನ್ನು ತಡಕಾಡುತ್ತಿದ್ದಾರೆ.
ಆಭರಣದ ಮಳಿಗೆ ಹೊಂದಿರುವ ರಾಜೀವ್ ಅರೋರಾ ಎಂಬುವರ ಮನೆ ಮತ್ತು ಅಂಗಡಿ ಸೇರಿ ದೆಹಲಿ ಹಾಗೂ ರಾಜಸ್ಥಾನದಲ್ಲಿರುವ ಅವರಿಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಹಾಸ್ಯನಟಿ ವಿರುದ್ಧ ಅವಾಚ್ಯವಾಗಿ ನಿಂದಿಸಿ, ರೇಪ್ ಮಾಡುವ ಬೆದರಿಕೆ ಹಾಕಿದ್ದವ ಸಿಕ್ಕಿಬಿದ್ದ