ಕೋಲ್ಕತ್ತ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಪಿಎಂ ಗರೀಬ್ ಕಲ್ಯಾಣ್ ಯೋಜನೆಯಡಿ ಬಡ ಜನರಿಗೆ ನವೆಂಬರ್ವರೆಗೂ ಉಚಿತ ರೇಷನ್ ಕೊಡುವುದಾಗಿ ಘೋಷಿಸಿದ್ದಾರೆ.
ಕರೊನಾ ವೈರಸ್ ದಿನೇದಿನೆ ಹೆಚ್ಚುತ್ತಿರುವುದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಅದೆಷ್ಟೋ ಜನರ ಜೀವನ ನಡೆಯುವುದು ತುಂಬ ಕಷ್ಟವಾಗುತ್ತಿದೆ ಎಂದು ಹೇಳಿದ ಪ್ರಧಾನಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಬರುವ ಸುಮಾರು 80 ಕೋಟಿ ಬಡಜನರಿಗೆ 2020ರ ನವೆಂಬರ್ವರೆಗೂ ಉಚಿತ ರೇಷನ್ ನೀಡಲಾಗುತ್ತದೆ ಎಂದಿದ್ದಾರೆ.
ಆದರೆ ಮೋದಿಯವರು ಹೀಗೆ ಘೋಷಣೆ ಮಾಡಿದ ಕೆಲವೇ ಹೊತ್ತಲ್ಲಿ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ರಾಜ್ಯದಲ್ಲಿ ನಾವು 2021ರ ಜೂನ್ವರೆಗೂ ಬಡಜನರಿಗೆ ಉಚಿತ ರೇಷನ್ ಕೊಡುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್ನಿಂದ 38 ಭಾರತೀಯ ಅಧಿಕಾರಿಗಳು ವಾಪಸ್; ಬಸ್, ಟ್ರಕ್ನಲ್ಲಿ ಗಡಿ ತಲುಪಿದ ಸಿಬ್ಬಂದಿ
ಪಶ್ಚಿಮ ಬಂಗಾಳದಲ್ಲಿ ಶೇ.60ರಷ್ಟು ಜನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಒಳಪಟ್ಟವರು. ಇಂದು ಅವರಿಗೆ ಅಕ್ಕಿ, ಬೇಳೆ ಸಿಗುತ್ತದೆ. ಆದರೆ ಅವಧಿ ಮುಗಿದ ಮೇಲೆ ಅವರಿಗೆ ಏನೂ ಸಿಗುವುದಿಲ್ಲ. ಆದರೆ ನಾನು 2021ರ ಜೂನ್ವರೆಗೂ ಬಡಜನರಿಗೆ ಉಚಿತ ರೇಷನ್ ಕೊಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಬಡವರಿಗೆ ಅಷ್ಟೇ ಅಲ್ಲ. ದೇಶದ 130 ಕೋಟಿ ಜನರಿಗೂ ಉಚಿತ ಅಕ್ಕಿ, ಬೇಳೆ ಕೊಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಟಿಕ್ಟಾಕ್ ಮಾಡಿ ಲಕ್ಷ ಗೆಲ್ಲಿ! ಡಿಕೆಶಿ ಪರ ನಲ್ಪಾಡ್ ಘೋಷಣೆ- ನೆಟ್ಟಿಗರ ಆಕ್ರೋಶ
ಇದೇ ಹೊತ್ತಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಚೀನಾಕ್ಕೆ ಕಟುವಾದ ಉತ್ತರವನ್ನು ಭಾರತ ಕೊಡಬೇಕು. ಈ ಬಿಕ್ಕಟ್ಟಿನ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್)
ಪೊಲೀಸ್ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?