ಬೆಂಗಳೂರು: ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಏಳು ದಿನಗಳು ಕಳೆದವು. ಇಂದಿಗೂ ಅವರಿಲ್ಲ ಎಂಬುದನ್ನು ನಂಬಲು ಆಗದಿದ್ದರೂ, ಅವರ ಸಾವು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದರೆ, ಚಿತ್ರರಂಗ ಪ್ರತಿಭಾವಂತ ಯುವನಟನನ್ನು ಕಳೆದುಕೊಂಡಿದೆ. ಕರುನಾಡು, ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಅಣ್ಣನಿಲ್ಲದ ಮೇಲೆ …; ಚಿರು ನೆನೆದು ಧ್ರುವ ಭಾವುಕ ಪೋಸ್ಟ್!
ಹೀಗಿರುವಾಗಲೇ ಅಣ್ಣನನ್ನು ಕಳೆದುಕೊಂಡಿರುವ ಧ್ರುವ, ನೀನಿಲ್ಲದೆ ಇರಲು ಆಗುತ್ತಿಲ್ಲ. ಬೇಗ ಬಂದು ಬಿಡು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಳೇ ಫೋಟೋ ಶೇರ್ ಮಾಡಿಕೊಂಡು ಭಾವುಕರಾಗಿದ್ದರು. ಸ್ನೇಹಿತರು, ಆಪ್ತರು ಚಿರುನನ್ನು ನೆನಪು ಮಾಡಿಕೊಂಡಿದ್ದಾರೆ. ಇದೀಗ ಅರ್ಜುನ್ ಸರ್ಜಾ ಪುತ್ರಿ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು. ಅರ್ಜುನ್ ಸರ್ಜಾ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ, ಚಿರಂಜೀವಿ ಎಂದು ಬರೆದುಕೊಂಡು ಬ್ಲಾಕ್ ಬಣ್ಣದ ಹಾರ್ಟ್ ಎಮೋಜಿ ಹಾಕಿ ಹಳೇ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಉಡುಗೊರೆ ನೋಡಿ ಭಾವುಕರಾಗಿದ್ರು ಮೇಘನಾ: ಮಗು ವಿಚಾರದಲ್ಲೂ ಚಿರು ಆಸೆ ಹೀಗಿತ್ತು
ಇನ್ನು ಸಾವಿಗೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನಟ ಚಿರು ಸರ್ಜಾ, ಸೂರಜ್ ಸರ್ಜಾ, ಧ್ರುವ ಸರ್ಜಾ ಒಟ್ಟಿಗೆ ಇರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೋ ಎಲ್ಲೆಡೆ ವೈರಲ್ ಆಗುವುದರ ಜತೆಗೆ ತ್ರಿವಳಿ ಜೋಡಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಬಳಿಕ ಚಿರು ಸಾವಿನ ನಂತರ ಅದೇ ಫೋಟೋವನ್ನು ಸಂಬಂಧಿ ಸೂರಜ್ ಸಹ ಹಂಚಿಕೊಂಡು ಚಿರು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದರು. ಇದೀಗ ಐಶ್ವರ್ಯಾ ಸರ್ಜಾ ಏನೂ ಹೇಳದೆ, ಕೇವಲ ಬಾಲ್ಯದ ಫೋಟೋಗಳನ್ನಷ್ಟೇ ಪೋಸ್ಟ್ ಮಾಡಿದ್ದಾರೆ.
ಚಿರು ಸಾವಿನ ಬೆನ್ನಲ್ಲೇ ಅರ್ಜುನ್ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?