ನವದೆಹಲಿ: ಅದನ್ನು ಅವಸರ ಅಂಥೇನೂ ಹೇಳೋಕಾಗಲ್ಲ. ಆದರೆ, ಕೊಂಚ ತಾಳಬಹುದಿತ್ತು. ಅದೊಂದು ಈಮೇಲ್ ಕಳುಹಿಸುವುದು ಇನ್ನೆರಡು ದಿನ ವಿಳಂಬವಾಗಿದ್ದರೆ, ಆತ ಬರೋಬ್ಬರಿ 17.38 ಕೊಟಿ ರೂ.ಗಳ ಒಡೆಯನಾಗಿರುತ್ತಿದ್ದ. ಆದರೆ, ದುರಾದೃಷ್ಟ ಮೂರು ಬಾರಿ ಕೋರ್ಟ್ ಮೆಟ್ಟಿಲೇರಿದರೂ ಕಂಪನಿಯಿಂದ ಪರಿಹಾರ ಮೊತ್ತ ಪಡೆಯುವುದು ಆತನಿಗೆ ಸಾಧ್ಯವಾಗಲಿಲ್ಲ.
ಜಗತ್ತಿನ ಅತಿ ದೊಡ್ಡ ಸಿಮೆಂಟ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಲಾಫರ್ಜ್ನಲ್ಲಿ ಆ್ಯಂಟನಿ ಜನೋನ್ ಮುಖ್ಯ ಹುದ್ದೆಯಲ್ಲಿದ್ದ. 2015ರಲ್ಲಿ ಈ ಕಂಪನಿಯನ್ನು ಹೊಲ್ಸಿಮ್ ಜತೆಗೆ ವಿಲೀನಗೊಳಿಸಲು ನಿರ್ಧರಿಸಲಾಯಿತು. ಇದರಂತೆ, 380 ಹುದ್ದೆಗಳ ಕಡಿತ ಮಾಡಲಾಗುತ್ತದೆ. ಉದ್ಯೋಗಿಗಳಿಗೆ ಪರಿಹಾರ ಮೊತ್ತ ನೀಡಲಾಗುವುದು ಎಂದು ಲಾಫರ್ಜ್ ಘೋಷಿಸಿತು.
ಇದನ್ನೂ ಓದಿ; ಕರೊನಾ ಪ್ರಕರಣಗಳಿಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ಸಾರ್ವಜನಿಕ ಸಭೆ, ಸಮಾರಂಭಗಳಿಗೂ ಇಲ್ಲ ನಿರ್ಬಂಧ
ಅದರಂತೆ, ಜನೋನ್ ಕೂಡ ತನಗೂ ಪರಿಹಾರ ಮೊತ್ತ ಸಿಗಲಿದೆ ಎಂದೇ ಭಾವಿಸಿದ್ದ. ಆದರೆ, ನಡೆದಿದ್ದೇ ಬೇರೆ.
ಆ್ಯಂಟನಿ ಕಂಪನಿಯ ಸಿಂಗಾಪೂರ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಎರಡು ವರ್ಷಗಳ ಬಳಿಕ ಪ್ಯಾರೀಸ್ಗೆ ಮರಳಿದ. ಕಂಪನಿ ಆತನಿಗೆ ಯೋಜನಾ ವ್ಯವಸ್ಥಾಪಕ ಹುದ್ದೆ ನೀಡಿದ್ದರೂ ಆತ ಸ್ವೀಕರಿಸಿರಲಿಲ್ಲ. ಆತ ಯಾವುದೇ ಕೆಲಸ ಮಾಡದಿದ್ದರೂ ಆತನಿಗೆ 13.60 ಲಕ್ಷ ರೂ. ವೇತನ ನೀಡಲಾಗುತ್ತಿದೆ ಎಂದು ಕಂಪನಿ ಕೋರ್ಟ್ಗೆ ತಿಳಿಸಿತ್ತು.
ಈ ನಡುವೆ, ಹುದ್ದೆ ಕಡಿತಕ್ಕೆ ಮುಂದಾದ ಕಂಪನಿ ಪರಿಹಾರ ಯೋಜನೆ ಘೋಷಿಸಿ ಅದನ್ನು ಪೂರ್ವಾನ್ವಯಗೊಳಿಸಿತ್ತು. ಮತ್ತದು ದೇಶೀಯ ಸಿಬ್ಬಂದಿಗೆ ಮಾತ್ರ ಎಂದು ಷರತ್ತು ವಿಧಿಸಿತ್ತು. ದುರಾದೃಷ್ಟವೆಂದರೆ, ಕಂಪನಿ ಪರಿಹಾರಕ್ಕೆ ನಿಗದಿಪಡಿಸಿದ್ದ ಕಟ್ಆಫ್ ದಿನಾಂಕಕ್ಕೆ ಎರಡು ದಿನ ಮೊದಲು ಆತ ಸಿಂಗಾಪೂರ್ನಲ್ಲಿ ಕೆಲಸ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿ ಈಮೇಲ್ ಕಳುಹಿಸಿದ್ದ.
ಇದನ್ನೂ ಓದಿ; ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು
ಆತ ವಿದೇಶದಲ್ಲಿ ಕೆಲಸ ಮಾಡಲು ಒಪ್ಪಿದ್ದರಿಂದ ಫ್ರೆಂಚ್ ಕಾರ್ಮಿಕ ಕಾನೂನು ಅನ್ವಯವಾಗದು. ಒಂದು ವೇಳೆ ಒಪ್ಪಿಕೊಳ್ಳುವುದು ಎರಡು ದಿನ ತಡವಾಗಿದ್ದರೆ ಆತ ಪರಿಹಾರಕ್ಕೆ ಅರ್ಹನಾಗುತ್ತಿದ್ದ ಎಂದು ಫ್ರೆಂಚ್ ನ್ಯಾಯಾಲಯ ತೀರ್ಪು ನೀಡಿದೆ.
ಹೀಗಾಗಿ ಆ್ಯಂಟನಿ ಕಂಪನಿಯಿಂದ 17.38 ಕೋಟಿ ರೂ. ಪರಿಹಾರ ಪಡೆಯುವ ಅವಕಾಶದಿಂದ ವಂಚಿತನಾಗಿದ್ದಾನೆ.
ಬೆಂಜ್, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ