ಮುಂಬೈ: ಬಾಲಿವುಡ್ನ ಸ್ಟಾರ್ ನಟ ಆಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್ ಅವರಿಂದ ದೂರವಾಗಿ ತುಂಬಾ ವರ್ಷಗಳಾಗುತ್ತ ಬಂದರೂ ಈವರೆಗೆ ಯಾವ ಕಾರಣಕ್ಕೆ ವಿಚ್ಛೇದನ ನೀಡಿದರು ಎಂಬುದು ರಿವೀಲ್ ಆಗಿಲ್ಲ. ವಿಚ್ಛೇದನ ಪಡೆದ ನಂತರವೂ ಇವರಿಬ್ಬರು ಅನ್ಯೋನ್ಯವಾಗಿದ್ದು, ಇಬ್ಬರು ಆಗಿಂದಾಗೆ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಿರುತ್ತಾರೆ.
ಇಬ್ಬರು ವಿಚಾರ ಒಂದಕ್ಕೆ ಮತ್ತೊಮ್ಮೆ ಒಂದಾಗಿದ್ದು, ಒಟ್ಟಾಗಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಿರಣ್ ರಾವ್ ನಿರ್ದೆಶನದ ಲಾಪತಾ ಲೇಡಿಸ್ ಸಿನಿಮಾಗೆ ಆಮೀರ್ ಖಾನ್ ಬಂಡವಾಳ ಹೂಡಿದ್ದು ಮಾರ್ಚ್ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಸಿನಿಮಾದ ಪ್ರಮೋಶನ್ ವೇಳೆ ಮಾಜಿ ಪತ್ನಿಯನ್ನು ಉದ್ಧೇಶಿಸಿ ಆಮೀರ್ ಖಾನ್ ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗುರಿಯಾಗಿದೆ.
ಖಾಸಗಿ ಸುದ್ದಿ ವಾಹಿನಿ ಒಂದರಲ್ಲಿ ಒಟ್ಟಾಗಿ ಭಾಗಿಯಾಗಿದ್ದ ಆಮೀರ್ ಹಾಗೂ ಕಿರಣ್ಗೆ ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಆಮೀರ್ ಉತ್ತರಿಸಿರುವ ರೀತಿ ಎಲ್ಲರ ಗಮನ ಸೆಳೆದಿದ್ದು, ಇವರಿಬ್ಬರು ಪ್ರಭುದ್ಧವಾಗಿ ಚಿಂತಿಸುತ್ತಾರೆ ಎಂಬುದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್ ಲಂಕೇಶ್
ಒಂದು ದಿನ ಸಂಜೆ ನಾವಿಬ್ಬರು ಕುಳಿತಿದ್ದಾಗ ಕಿರಣ್ಗೆ ಒಂದು ಪ್ರಶ್ನೆ ಕೇಳಿದೆ. ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ? ಜೀವನದಲ್ಲಿ ಮುಂದೆ ಸಾಗುತ್ತಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಬೇಕು ಎಂದು ನಾನು ಕಿರಣ್ಗೆ ನಾನು ಕೇಳಿದೆ. ಇದಕ್ಕೆ ಉತ್ತರಿಸಿದ ಕಿರಣ್ ಓಕೆ.. ಬರೆದುಕೊಳ್ಳಿ ಅಂತ ಕಿರಣ್ ನನಗೆ ಪಟ್ಟಿ ನೀಡಿದರು. ನೀವು ಬಹಳ ಮಾತನಾಡುತ್ತೀರಿ. ಬೇರೆಯವರಿಗೆ ಮಾತನಾಡಲು ನೀವು ಬಿಡುವುದಿಲ್ಲ. ನಿಮ್ಮದೇ ವಾದಕ್ಕೆ ಅಂಟಿಕೊಂಡಿರುತ್ತೀರಿ. ಈ ರೀತಿ 15-20 ವಿಷಯಗಳ ಪಟ್ಟಿ ನೀಡಿದರು ಎಂದು ಆಮೀರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮಿರ್ ಖಾನ್ ಸಿತಾರೆ ಜಮೀನ್ ಪರ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಲಾಪತಾ ಲೇಡಿಸ್ ಚಿತ್ರದ ಪ್ರಮೋಸನ್ನಲ್ಲಿ ತೊಡಗಿಸಿಕೊಂಡಿದ್ದಾರೆ.