ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 11ನೇ ವಾರದ ಅಂತ್ಯದತ್ತ ಸಾಗುತ್ತಿದ್ದು, 10ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಪವಿ ಪೂವಪ್ಪ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಮಾಡಿ ಚಿತ್ರೀಕರಣ: ಮಾಜಿ ಶಾಸಕ ಸೇರಿ 9 ಮಂದಿ ವಿರುದ್ಧ ಮಹಿಳೆ ದೂರು
ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಜನರಲ್ಲಿ ಮೂಡಿರುವಂತ ಅಭಿಪ್ರಾಯಗಳು, ಬದಲಾವಣೆಗಳನ್ನು ತಿಳಿದುಕೊಂಡ ಪವಿ, ಈ ರೀತಿ ಮಾತನಾಡಿದ್ದಾರೆ. “ನೀರು ಎರಚುವ ಟಾಸ್ಕ್ನಲ್ಲೇ ತನಿಷಾ ಅಷ್ಟೊಂದು ಕೋಪದಿಂದ ಆಡುತ್ತಿದ್ದರು. ನಾನು ಮನೆಯೊಳಗೆ ಕಾಲಿಟ್ಟ ತಕ್ಷಣ ತುಂಬ ಚೆನ್ನಾಗಿ ಮಾತನಾಡಿಸಿದರು. ಅದು ನನಗೆ ಡಬಲ್ ಫೇಸ್ ಅನಿಸಿತು. ಅದು ನನಗೆ ಇಷ್ಟವಾಗಲಿಲ್ಲ” ಎಂದರು.
“ಏಕೆ ಅಂದ್ರೆ ಮುಂದಿನ ವಾರದ ನಾಮಿನೇಷನ್ಗೆ ಯಾರು ತನ್ನ ಹೆಸರನ್ನು ತೆಗದುಕೊಳ್ಳಬಾರದು ಎಂದು ಸ್ವೀಟ್…ಸ್ವೀಟ್ ಆಗಿ ಮಾತನಾಡುವುದು, ಟಾಸ್ಕ್ನಲ್ಲಿ ಕಿರುಚುವುದು ಮಾಡುತ್ತಾರೆ. ಸುದೀಪ್ ಸರ್ ಲೆಟರ್ ಬರೆದು ಕಳುಹಿಸಿದಾಗ ಲೌಡ್ ಅಂತ ಬರೆದು, ಸೌಂಡ್ ಮಾಡಬೇಕು ಎಂದು ತಿಳಿಸಿದ್ದರು. ಆದಾದ ಮೇಲೆ ಅವರು ಅದನ್ನು ಯಾವ ರೀತಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ! ಅದನ್ನು ಹೇಳಿದ ಮೇಲಂತೂ ಹೆಚ್ಚು ಕಿರಾಚುಡುವುದೇ ಆಗಿದೆ” ಎಂದರು.
ಇದನ್ನೂ ಓದಿ: BBKS10: ಅರ್ಧ ಶೇರ್ಗೆ ಒಪ್ಪದ ತನಿಷಾ; ಲಕ್ಷುರಿಗಾಗಿ ಮನೆಯೊಳಗೆ ನಡೆದಿದ್ದು….?
“ಮನೆಯೊಳಗೆ ಡ್ರಾಮಾ ಮಾಡುವುದು ತನಿಷಾ ಅನಿಸ್ತಾರೆ. ವರ್ತೂರು ಅವರ ಜತೆ ಇರುವುದು……..” ಮತ್ತಷ್ಟು ಸಂಗತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.