ನವದೆಹಲಿ: ಭಾರತದಲ್ಲಿ ಐಫೋನ್ಗಳ ತಯಾರಿಕೆಯನ್ನು ಹೆಚ್ಚಿಸುವ ಆ್ಯಪಲ್ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಯ ಲಾಭ ಪಡೆದು ಐಫೋನ್ ಬಿಡಿಭಾಗ ಜೋಡಿಸುವ ಭಾರತದ ಅತಿ ದೊಡ್ಡ ಕಾರ್ಖಾನೆಯನ್ನು ಚೆನ್ನೈ ಸಮೀಪ ಸ್ಥಾಪಿಸಲು ಟಾಟಾ ಸಮೂಹ ಚಿಂತನೆ ನಡೆಸಿದೆ.
ತಮಿಳುನಾಡಿನ ಹೊಸೂರಿನಲ್ಲಿ ದೊಡ್ಡ ಸ್ಥಾವರವನ್ನು ಸ್ಥಾಪಿಸುವುದು ಟಾಟಾ ಗುರಿಯಾಗಿದೆ. ಕಾರ್ಖಾನೆಯಲ್ಲಿ ಬಿಡಿಭಾಗ ಜೋಡಿಸುವ 20 ಅಸೆಂಬ್ಲಿ ಲೈನ್ಗಳಿದ್ದು ಸುಮಾರು 50,000 ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಭವವಿದೆ ಎಂದು ಮೂಲದವರು ತಿಳಿಸಿದ್ದಾರೆ. 12ರಿಂದ 18 ತಿಂಗಳಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಲು ಟಾಟಾ ಯೋಜಿಸಿದೆ ಎಂದವರು ಹೇಳಿದ್ದಾರೆ.
ಕರ್ನಾಟಕದ ನರಸಾಪುರದಲ್ಲಿದ್ದ ಐಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಕಾರ್ಪೊರೇಶನ್ಅನ್ನು ಟಾಟಾ ಈಗಾಗಲೇ ಖರೀದಿಸಿದೆ. ಸರಬರಾಜು ಸರಣಿಯನ್ನು ಸ್ಥಳಿಯಗೊಳಿಸುವ ಹಾಗೂ ಟಾಟಾದೊಂದಿಗಿನ ಪಾಲುದಾರಿಕೆಯನ್ನು ಬಲಪಡಿಸುವ ಆ್ಯಪಲ್ ಪ್ರಯತ್ನಗಳಿಗೆ ಹೊಸೂರು ಸ್ಥಾವರ ಇಂಬು ನೀಡಲಿದೆ. ಚೀನಾದಲ್ಲಿ ಐೋನ್ ಉತ್ಪಾದನೆ ಪ್ರಕ್ರಿಯೆಯಿಂದ ದೂರ ಸರಿದು ತನ್ನ ಕಾರ್ಯಾಚರಣೆಗಳನ್ನು ಭಾರತ, ಥಾಯ್ಲೆಂಡ್, ಮಲೇಶ್ಯಾ ಮತ್ತಿತರ ಕಡೆ ವಿಸ್ತರಿಸಲು ಆ್ಯಪಲ್ ಮುಂದಾಗಿದೆ.