ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಮಂಗಳೂರಿನ ವೈದ್ಯರ ತಂಡ ಗಮನ ಸೆಳೆದಿದೆ.
ಮಂಗಳೂರಿನ ಕದ್ರಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ 13 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿತ್ತು. ಅದರನ್ನು ರಕ್ಷಣೆ ಮಾಡಿದ ಉರಗ ರಕ್ಷಕ ಧೀರಜ್ ಗಾಣಿಗ ವೈದ್ಯರಲ್ಲಿಗೆ ತಂದಿದ್ದರು. ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ ಹೆಬ್ಬಾವಿನ ಹೊಟ್ಟೆಯಲ್ಲಿ ಮಲ ತುಂಬಿರುವುದು ಪತ್ತೆಯಾಯಿತು.
ಇದನ್ನೂ ಓದಿ: ತೀವ್ರ ಬರಗಾಲ! ಶೇ.93 ರಷ್ಟು ಬೆಳೆ ಸಮೀಕ್ಷೆ ಪೂರ್ಣ! ಜಿಲ್ಲೆಗೆ. ಅ.6 ರಂದು ಕೇಂದ್ರ ಅಧ್ಯಯನ ತಂಡ
ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹೆಬ್ಬಾವು ಹೊಟ್ಟೆಯಲ್ಲಿದ್ದ ಮಲವನ್ನು ಹೊರ ತೆಗೆಯಲಾಗಿದೆ. ಇದೀಗ ಹೆಬ್ಬಾವು ಚೇತರಿಸಿಕೊಂಡಿದ್ದು, ಅದನ್ನು ಮರಳಿ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ.
ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್ ಹಾಗೂ ಸಮೀಕ್ಷಾ ರೆಡ್ಡಿ ತಂಡದಿಂದ ಹೆಬ್ಬಾವಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದು, ವೈದ್ಯರ ತಂಡಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೀನ್ ಕೈಯಿಂದ ನಾಂದೇಡ್ ಆಸ್ಪತ್ರೆಯ ಟಾಯ್ಲೆಟ್ ಸ್ವಚ್ಛಗೊಳಿಸಿದ ಶಿವಸೇನಾ ಸಂಸದನ ವಿರುದ್ಧ ಪ್ರಕರಣ ದಾಖಲು