ನವದೆಹಲಿ: ಪ್ರಯಾಣಿಕ ಓರ್ವ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣ ಲಂಡನ್ ಕಡೆಗೆ ಹೊರಟಿದ್ದ ಏರ್ ಇಂಢಿಯಾ ವಿಮಾನವು ದೆಹಲಿಗೆ ವಾಪಸ್ ಆಗಿರುವ ಘಟನೆ ಸೋಮವಾರ ನಡೆದಿದೆ.
ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಟೇಕ್ ಆಪ್ ಆದ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರೊಬ್ಬರು ಇಬ್ಬರು ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣ ವಿಮಾನವನ್ನು ವಾಪಸ್ ದೆಹಲಿಯಲ್ಲಿ ಲ್ಯಾಂಡ್ ಮಾಡಲಾಯಿತು ಎಂದು ಏರ್ ಇಂಡಿಯಾ ವಿಮಾನ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಚ್ಚರಿಕೆಗೆ ಬಗ್ಗದ ಪ್ರಯಾಣಿಕ
ವಿಮಾನದ ಸಿಬ್ಬಂದಿ ಮೌಖಿಕವಾಗಿ, ಲಿಖಿತವಾಗಿ ಎಚ್ಚರಿಕೆ ನೀಡಿದರೂ ಸಹ ಪ್ರಯಾಣಿಕ ಅದಕ್ಕೆ ಬೆಲೆ ಕೊಡದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ ಪೈಲಟ್ ಇನ್ ಕಮಾಂಡ್ ವಿಮಾನವನ್ನು ವಾಪಸ್ ದೆಹಲಿ ಕಡೆಗೆ ತಿರುಗಿಸಲಾಯಿತು.
ಇದನ್ನೂ ಓದಿ: ಮೀನು ಹಿಡಿಯುವ ವೇಳೆ ಮೊಸಳೆ ದಾಳಿ; ವ್ಯಕ್ತಿ ಎಸ್ಕೇಪ್ ಆಗಿದ್ದೆ ರೋಚಕ
ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ನಂತರ ಆರೋಪಿ ಜಸ್ಕೀರಾತ್ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ಪ್ರಕರಣದ ಸಂಬಂಧ FIR ದಾಖಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಮಾನಸಿಕ ಅಸ್ವಸ್ಥ
ವಿಮಾನ ಸಿಬ್ಬಂದಿ ಮೇಲೆ ಹ್ಲಲೆ ಕುರಿತು ಪ್ರತಿಕ್ರಿಯಿಸಿರುವ ಜಸ್ಕೀರಾತ್ ಕುಟುಂಬಸ್ಥರು ಆತ ಮಾನಸಿಕ ಅಸ್ವಸ್ಥನಾಗಿದ್ದು ಘಟನೆ ಕುರಿತು ವಿಷಾದಿಸಿ ಕ್ಷಮಾಪಣೆ ಕೋರಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಹರೀಕ ವಿಮಾನಯಾಣ ನಿರ್ದೇಶನಾಲಯ(DBCA) ಏರ್ ಇಂಡಿಯಾ ವಿಮಾನದಲ್ಲಿ ಘಟನೆ ನಡೆದಿದ್ದು ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.