ಹೈದರಾಬಾದ್: ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೈಸೂರಿನ ಲಾಡ್ಜ್ ಒಂದರಲ್ಲಿ ಇಬ್ಬರನ್ನು ನರೇಶ್ ಅವರ ಮೂರನೇ ಪತ್ನಿ ರಮ್ಯಾ ರೆಡ್ಹ್ಯಾಂಡ್ ಆಗಿ ಹಿಡಿದಿದ್ದು ಭಾರೀ ಸುದ್ದಿಯಾಗಿತ್ತು.
ನರೇಶ್ ಮತ್ತು ಪವಿತ್ರ ಲೋಕೇಶ್ ನಡುವೆ ಲವ್ವಿಡವ್ವಿ ಇದ್ದು, ಮೂರನೇ ಪತ್ನಿ ರಮ್ಯಾ ಸದ್ಯ ನರೇಶ್ ವಿರುದ್ಧ ಬುಸುಗುಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ, ನರೇಶ್ ಯಾವ ರೀತಿಯ ವ್ಯಕ್ತಿ? ಮತ್ತು ನರೇಶ್ಗೆ ಇರುವ ದುರಾಭ್ಯಸಗಳು ಎಂಥವು ಎಂಬುದನ್ನು ಬಯಲು ಮಾಡಿದ್ದಾರೆ.
ಕಾರು ಚಾಲಕನ ಜೊತೆಗೆ ರಮ್ಯಾ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ನರೇಶ್ ಕತೆ ಕಟ್ಟಿದ್ದರಂತೆ. ಅಲ್ಲದೆ, ಸಿಕ್ಕ ಸಿಕ್ಕವರ ಜೊತೆ ರಮ್ಯಾ ಹೆಸರನ್ನು ತಳುಕು ಹಾಕುತ್ತಿದ್ದರಂತೆ. ಸದಾ ನನ್ನ ಮೇಲೆ ಆರೋಪ ಮಾಡುವುದೇ ನರೇಶ್ ಕೆಲಸವಾಗಿತ್ತು. ನಾನು ಸಾಕಷ್ಟು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದಾನೆ. ಆ ಪ್ರಮಾಣದಲ್ಲಿ ನರೇಶ್ ನನಗೆ ತೊಂದರೆ ಕೊಟ್ಟಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ್ದಾರೆ.
ನರೇಶ್ಗೆ ಹೆಚ್ಚು ಹೆಚ್ಚು ಪೋರ್ನ್ ವಿಡಿಯೋಗಳನ್ನು ನೋಡುವ ಚಟ ಇದೆ. ಅಪ್ಪ ಸಾಕಷ್ಟು ಕೆಟ್ಟ ವಿಡಿಯೋಗಳನ್ನು ನೋಡುತ್ತಾರೆ ಎಂದು ಮಗ ರಣವೀರ್ ಬಂದು ಹೇಳಿದಾಗಲೇ ನನಗೆ ಆ ಬಗ್ಗೆ ಗೊತ್ತಾಗಿದ್ದು, ಓರ್ವ ತಂದೆಯಾಗಿ ಎಷ್ಟು ಜವಾಬ್ದಾರಿ ಇರಬೇಕು? ಆದರೆ, ನರೇಶ್ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಎಂದು ರಮ್ಯಾ ಬಹಿರಂಗಪಡಿಸಿದ್ದಾರೆ.
ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ಪೋಷಕ ನಟ ನರೇಶ್ ಹಾಗೂ ಕನ್ನಡ, ತೆಲುಗು ಚಿತ್ರಗಳಲ್ಲಿ ಪೋಷಕ ನಟಿ ಪವಿತ್ರಾ ಲೋಕೇಶ್ ನಡುವೆ ಸಂಬಂಧ ಇರುವುದಾಗಿ ನರೇಶ್ ಪತ್ನಿ ರಮ್ಯಾ, ಮಾಧ್ಯಮಗಳ ಮುಂದೆ ಹೇಳಿದ್ದರು. ಇದಲ್ಲದೇ ತಮಗೆ ಪತಿಯಿಂದ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ನರೇಶ್ ಹಾಗೂ ಪವಿತ್ರಾ ಹೋಟೆಲ್ನಲ್ಲಿ ಒಂದೇ ರೂಮಿನಲ್ಲಿ ನೆಲೆಸಿದ್ದರು. ಇಷ್ಟೆಲ್ಲಾ ನಡೆದ ಮೇಲೂ ಪವಿತ್ರಾ ಲೋಕೇಶ್ ಮಾತ್ರ ತಮ್ಮ ಹಾಗೂ ನರೇಶ್ ನಡುವಿನ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ಬಿಚ್ಚಿಟ್ಟಿರಲಿಲ್ಲ. ನರೇಶ್ ಕೇವಲ ತನಗೆ ಒಬ್ಬ ಒಳ್ಳೆಯ ಗೆಳೆಯ ಎಂದೇ ವಾದಿಸಿದ್ದರು.
ಆದರೆ ಇದೀಗ ನರೇಶ್ 2023ರ ಹೊಸ ವರ್ಷಕ್ಕೆ ಹೊಸ ಸುದ್ದಿ ಎಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ನರೇಶ್ ಕ್ಯಾಂಡಲ್ ಲೈಟ್ನಲ್ಲಿ ಪವಿತ್ರಾ ಲೋಕೇಶ್ ಅವರೊಂದಿಗೆ ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿದ್ದಾರೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ, ಈ ಹೊಸ ವರ್ಷಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕು. ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್ರೊಂದಿಗಿನ ಸಂಬಂಧಕ್ಕೆ ಮುದ್ರೆ ಒತ್ತಿದ್ದಾರೆ. (ಏಜೆನ್ಸೀಸ್)
ಮಲಯಾಳಂ ನಟಿ ಜತೆಗಿನ ಸಂಬಂಧವೇ ನಟ ವಿಜಯ್ ಡಿವೋರ್ಸ್ಗೆ ಕಾರಣ? ವೈರಲ್ ಫೋಟೋ ಅಸಲಿಯತ್ತೇನು?
ಜಲ್ಲಿ ಬಂದ್, ಬದುಕು ಕ್ರಷ್: ನಿರ್ಮಾಣ ಕಾಮಗಾರಿ ಸ್ಥಗಿತ, ಕಾರ್ವಿುಕರಿಗೆ ಸಂಕಷ್ಟ
ಪರಿಶಿಷ್ಟ ಜಾತಿಗೆ ಮಡಿವಾಳ ಸಮುದಾಯ ಸೇರ್ಪಡೆ; ಸಿಎಂ ಬೊಮ್ಮಾಯಿ ಭರವಸೆ: ಬಿಎಸ್ವೈಗೆ ಮಾಚಿದೇವ ಪ್ರಶಸ್ತಿ ಪ್ರದಾನ