ನವದೆಹಲಿ: ಅಕ್ಟೋಬರ್ 15 ರ ಶುಕ್ರವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವೆ ನಡೆಯುವ ಫೈನಲ್ ಪಂದ್ಯದ ಬಳಿಕ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ವಿದ್ಯುಕ್ತ ತೆರೆ ಬೀಳಲಿದೆ.
ಥ್ರಿಲ್ಲಿಂಗ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕಾದು ಕುಳಿತಿದ್ದಾರೆ. ದಸರಾ (ಅ.15) ಸಂಭ್ರಮದ ನಡುವೆಯೇ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕ ಆಗಿದೆ.
ಇನ್ನು ಐಪಿಎಲ್ ಇತಿಹಾಸದಲ್ಲೇ ಸಿಎಸ್ಕೆ ಮೂರು ಟ್ರೋಫಿ ಗೆದ್ದಿದೆ. 9 ಬಾರಿ ಪ್ಲೇ ಆಫ್ ಸುತ್ತಿಗೇರಿದ್ದು, 8 ಬಾರಿ ಫೈನಲ್ ಪ್ರವೇಶಿಸಿದೆ. ಕೊಲ್ಕತ ಕೇವಲ ಒಂದು ಬಾರಿ ಮಾತ್ರ ಐಪಿಎಲ್ ಟ್ರೋಫಿ ಎತ್ತಿಹಿಡಿದಿದೆ ಮತ್ತು 6 ಬಾರಿ ಪ್ಲೇ ಆಫ್ ಪ್ರವೇಶಿಸಿದೆ.
ಇದೀಗ ಅಭಿಮಾನಿಗಳಲ್ಲಿ ಈಗಾಗಲೇ ಚರ್ಚೆಯಾಗುತ್ತಿರುವಂತೆ ನಾಳಿನ ಫೈನಲ್ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ? ಎಂಬ ಪ್ರಶ್ನೆ ಮೂಡಿದೆ. ಜ್ಯೋತಿಷಿಗಳ ಪ್ರಕಾರ ಕೆಲವು ವರ್ಷಗಳಲ್ಲಿ ನೈಟ್ ರೈಡರ್ಸ್ ಐಪಿಎಲ್ನಲ್ಲಿ ಪ್ರಾಬಲ್ಯ ಸಾಧಿಸಿದೆ. ಆದರೆ, ಈ ವರ್ಷ ಆರಂಭದಲ್ಲಿ ಕೆಕೆಆರ್ ತಂಡ ಹಿಂದೆ ಉಳಿದಿತ್ತು. ಇದೀಗ ಒಳ್ಳೆಯ ಟ್ರ್ಯಾಕ್ ಮರಳಿರುವ ತಂಡ ಫೈನಲ್ ಪ್ರವೇಶಿಸಿದೆ. ಆದಾಗ್ಯೂ, ತಂಡವು ಐಪಿಎಲ್ ಅನ್ನು ಗೆಲ್ಲುವುದಿಲ್ಲ. ಏಕೆಂದರೆ ಅದೃಷ್ಟದ ಮನೆಯಾದ 9ನೇ ಮನೆ ಕೆಕೆಆರ್ ಪರವಾಗಿಲ್ಲ ಎಂಬುದು ಜ್ಯೋತಿಷಿಗಳು ಭವಿಷ್ಯವಾಗಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಜ್ಯೋತಿಷಿಗಳ ಗೆಲ್ಲುವ ತಂಡವಾಗಿದೆ. ಈ ಬಾರಿಯು ಸಿಎಸ್ಕೆ ಫೈನಲ್ ತಲುಪಲಿದೆ ಎಂದು ಬಹುತೇಕ ಜ್ಯೋತಿಷಿಗಳು ಮೊದಲೇ ಭವಿಷ್ಯ ನುಡಿದಿದ್ದರು. ಅದರಂತೆಯೇ ಸಿಎಸ್ಕೆ ಫೈನಲ್ ತಲುಪಿದೆ. ಜಾತಕಫಲದಲ್ಲಿ ಗುರು ಗ್ರಹದ ಪ್ರಭಾವ ಸಿಎಸ್ಕೆ ತಂಡದ ಮೇಲಿದೆ. ಇನ್ನೊಂದೆಡೆ ನಾಳಿನ ಪಂದ್ಯದಲ್ಲಿ ಧೋನಿ ಆಟ ಹೇಗಿರಲಿದೆ ಎಂಬ ಕುತೂಹಲ ಹೊಂದಿರುವ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಬಹುದು. ಏಕೆಂದರೆ, ಧೋನಿ ಅವರ ಗುರು ಸ್ಥಾನವೂ ಅವರಿಗೆ ಅನುಕೂಲಕರವಾಗಿಲ್ಲ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.
ಆದರೆ, ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬುದನ್ನು ತಿಳಿಯಲು ನಾಳೆ ರಾತ್ರಿಯವರೆಗೆ ಕಾಯಬೇಕಾಗಿದೆ. ನಾಳೆ ಐಪಿಎಲ್ ಸೀಸನ್ 14ರ ಟ್ರೋಫಿಗಾಗಿ ಸಿಎಸ್ಕೆ ಮತ್ತು ಕೆಕೆಆರ್ ಮೈದಾನಕ್ಕಿಳಿದು ಕಾದಾಡಲಿದ್ದು, ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. (ಏಜೆನ್ಸೀಸ್)
ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್: ಈ ವರ್ಷದ ಕಾರ್ಣಿಕದ ಒಳಾರ್ಥ ಹೀಗಿದೆ…
ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುವವರು ಓದಲೇಬೇಕಾದ ಸ್ಟೋರಿ ಇದು..!
ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!