ಹೈದರಾಬಾದ್: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ ಅವರು ಗಣೇಶ ಹಬ್ಬದ ದಿನವೇ ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅಪಘಾತ ನಡೆದ ತಿಂಗಳು ಕಳೆಯುತ್ತಾ ಬಂದರೂ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಅವರ ಸೋದರಮಾವ ಹಾಗೂ ಸೂಪರ್ ಸ್ಟಾರ್ ಪವನ್ ಕಲ್ಯಾಣ್, ಧರಮ್ ತೇಜ್ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.
ಧರಮ್ ತೇಜ್ ಈಗಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿಲ್ಲ. ಇನ್ನೊಂದೆಡೆ ಧರಮ್ ತೇಜ್ ಅಭಿನಯದ “ರಿಪಬ್ಲಿಕ್” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 1ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಿಪಬ್ಲಿಕ್ ಸಿನಿಮಾ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಪವನ್ ಕಲ್ಯಾಣ್ ಆಗಮಿಸಿದ್ದರು. ಆದರೆ, ಧರಮ್ ತೇಜ್ ಆಸ್ಪತ್ರೆಯಲ್ಲೇ ಇರುವುದರಿಂದ ತಮ್ಮದೇ ಸಿನಿಮಾ ಈವೆಂಟ್ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದಲ್ಲಿ ಧರಮ್ ತೇಜ್ ಆರೋಗ್ಯದ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ಧರಮ್ ತೇಜ್ ಇನ್ನು ಬೆಡ್ ಮೇಲೆಯೇ ಇದ್ದು, ಈವರೆಗೂ ಕಣ್ಣನ್ನು ಕೂಡ ತೆರೆದಿಲ್ಲ ಎಂದರು. ಅಭಿಮಾನಿಗಳ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖವಾಗಲಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾನೆಂದು ತಿಳಿಸಿದರು.
ಅಪಘಾತ ಹೇಗಾಯಿತು?
ಹೈದರಾಬಾದ್ನ ಐಕಿಯಾ ಕೇಬಲ್ ಬ್ರಿಡ್ಜ್ ಬಳಿ ಸೆ.10 ಗಣೇಶ ಹಬ್ಬದ ರಾತ್ರಿ 7.30ರ ಸುಮಾರಿಗೆ ಅಪಘಾತ ಸಂಭವಿಸಿತು. ಹಬ್ಬದ ದಿನದಂದು ಐಕಿಯಾ ಕೇಬಲ್ ಬ್ರಿಡ್ಜ್ನಲ್ಲಿ ಟ್ರಾಫಿಕ್ ಇರಲಿಲ್ಲ. ರಸ್ತೆಗಳು ಖಾಲಿಯಿದ್ದದ್ದರಿಂದ ಧರಮ್ ತೇಜ್ ವೇಗವಾಗಿ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಸ್ಥಳದಲ್ಲಿ ಮರಳು ಇದ್ದುದ್ದರಿಂದ ಬೈಕ್ ಸ್ಕಿಡ್ ಆಯಿತು ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಧರಮ್ ತೇಜ್ ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ.
ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿರುವುದರಿಂದ ಭಾರತೀಯ ದಂಡಸಂಹಿತೆ 336 ಮತ್ತು 184 ಸೆಕ್ಷನ್ಗಳ ಅಡಿಯಲ್ಲಿ ರಾಯದುರ್ಗ ಠಾಣಾ ಪೊಲೀಸರು ಧರಮ್ ತೇಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)
VIDEO| ನಟ ಧರಮ್ ತೇಜ್ ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದಾರೆಂದರೆ ಅವರ ಕರ್ಮದ ಫಲ ಕಾರಣವಂತೆ!
ಇಷ್ಟೊಂದು ಮಿಸ್ಟೇಕ್ ಮಾಡಿದ್ರಾ ನಟ ಸಾಯಿ ಧರಮ್ ತೇಜ್? ತನಿಖೆಯಲ್ಲಿ ಬೈಕ್ ಕುರಿತ ಸ್ಫೋಟಕ ಮಾಹಿತಿ ಬಯಲು!
ನಟ ಧರಮ್ ತೇಜ್ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!
ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..
ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ…; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್ನಲ್ಲಿ ನಟ ಶ್ರೀನಾಥ್