ಹೈದರಾಬಾದ್: ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರಕ್ಕೆ ಒಂದಲ್ಲ ಒಂದು ಕಂಟಕ ಎದುರಾಗುತ್ತಲೇ ಇದೆ. ಮೊದಲಿಗೆ ಮುಂಬೈನಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ಪ್ರಾರಂಭಿಸಲಾಗಿತ್ತು. ಆದರೆ, ಆ ಸೆಟ್ಗೆ ಬೆಂಕಿ ಬಿದ್ದು, ಚಿತ್ರೀಕರಣ ಸ್ಥಗಿತಗೊಂಡಿತ್ತು. ಆ ನಂತರ ಸೆಟ್ಗಳನ್ನು ಪುನರ್ನಿರ್ಮಿಸಿ ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಸದ್ಯದಲ್ಲೇ ಹೈದರಾಬಾದ್ನಲ್ಲಿ ಚಿತ್ರೀಕರಣ ಮುಂದುವರೆಸಬೇಕು ಎನ್ನುವಷ್ಟರಲ್ಲೇ ಇನ್ನೊಂದು ಕಂಟಕ ಎದುರಾಗಿದ್ದು, ಚಿತ್ರೀಕರಣ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ನಾನು ಸತ್ತಿಲ್ಲ ಬದುಕಿದ್ದೇನೆ … ಸುಳ್ಳು ಸದ್ದಿ ಹಬ್ಬಿಸಬೇಡಿ ಎಂದ ಶಕ್ತಿಮಾನ್
ಹೌದು, ಆದಿಪುರುಷ್ ಚಿತ್ರದ ಚಿತ್ರೀಕರಣ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಲಾಕ್ಡೌನ್. ತೆಲಂಗಾಣದಲ್ಲಿ ಕರೊನಾ ಕೇಸ್ಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಹಲವು ಚಿತ್ರತಂಡಗಳು ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಮುಂದಾಗಿದ್ದವು. ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರತಂಡದವರು, ಕಳೆದ ಒಂದು ತಿಂಗಳಿನಿಂದ ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಮಿಕ್ಕಂತೆ ಬೇರೆ ಚಿತ್ರಗಳ ಚಿತ್ರೀಕರಣ ಸಹ ಹೈದರಾಬಾದ್ನಲ್ಲಿ ನಡೆಯುತ್ತಿತ್ತು.
ಅದೇ ಕಾರಣಕ್ಕೆ ಆದರೆ, ಕ್ರಮೇಣ ಕರೊನಾ ಕೇಸ್ಗಳಲ್ಲಿ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಸದ್ಯದಲ್ಲೇ ಹೈದರಾಬಾದ್ನಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕು ಎಂಬ ಚಿತ್ರತಂಡದ ಯೋಜನೆಗೆ ಇದರಿಂದ ಭಾರೀ ಹಿನ್ನೆಡೆಯಾಗಿದೆ.
ಇದನ್ನೂ ಓದಿ: ಕೊಟ್ಟಿದ್ದನ್ನು ಹೇಳಲು ಸಂಕೋಚ; ನೆಟ್ಟಿಗರ ಟೀಕೆಗೆ ದಾನದ ಪಟ್ಟಿ ತೆರೆದಿಟ್ಟ ಅಮಿತಾಬ್
ರಾಮಾಯಣವನ್ನು ಆಧರಿಸಿ ನಿರ್ಮಿಸಲಾಗುತ್ತಿರುವ ಆದಿಪುರುಷ್ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ನಟಿಸುತ್ತಿದ್ದಾರೆ. ಅವರಿಗೆ ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯಿಸುತ್ತಿದ್ದಾರೆ. ಇನ್ನು ಸೈಫ್ ಅಲಿ ಖಾನ್, ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾನಾಜಿ ಚಿತ್ರವನ್ನು ನಿರ್ದೇಶಿಸಿದ್ದ ಓಂರೌತ್ ಈ ಬಹುಕೋಟಿ ವೆಚ್ಚದ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕಾರ್ಮಿಕರ ಕಷ್ಟಕ್ಕೆ ಕಲಾವಿದರ ಸ್ಪಂದನೆ; ಹೀಗೊಂದು ವಿಭಿನ್ನ ನಿಧಿ ಸಂಗ್ರಹಣೆ