ಬೆಂಗಳೂರು: ಗಂಟಲು ದ್ರವ ಪಡೆಯದೆ, ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ ಅವಶ್ಯ ಬಿದ್ದವರಿಗೆ ಕರೊನಾ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚೋಡದೇವನಹಳ್ಳಿ ಮುಖೇಶ್ ಸಿಂಗ್ ಮತ್ತು ಹೊಸಹಳ್ಳಿಯ ನಾಗರಾಜ್ ಅಲಿಯಾಸ್ ಓಂ ಶಕ್ತಿ ಬಂಧಿತರು. ಎರಡು ಮೊಬೈಲ್, 5 ನಕಲಿ ಕರೊನಾ ನೆಗೆಟೀವ್ ವರದಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೊನಾ ಸೋಂಕು ಪರೀಕ್ಷೆಗೆ ಜನರಿಂದ ಗಂಟಲ ದ್ರವ ಪಡೆಯದೆ ಹಣ ಪಡೆದು ಜನರಿಗೆ ನೆಗೆಟಿವ್ ವರದಿ ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾರುವೇಷದಲ್ಲಿ ಸ್ಥಳಕ್ಕೆ ತೆರಳಿ ವರದಿ ಪಡೆಯುವ ನೆಪದಲ್ಲಿ ಸಿಸಿಬಿ ಅಧಿಕಾರಿಗಳು ಸಂಪರ್ಕಿಸಿದ್ದರು. ಆರೋಪಿಗಳು ಒಂದು ವರದಿಗೆ 700 ರೂ. ಪಡೆದು ಮೂರು ದಿನಗಳ ಬಳಿಕ ನೆಗೆಟಿವ್ ವರದಿ ನೀಡುವುದಾಗಿ ಹೇಳಿದ್ದರು.
ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜತೆಗೆ ಆರೋಪಿಗಳು ಶಾಮೀಲಾಗಿದ್ದಾರೆ. ಮುಖೇಶ್ ಮತ್ತು ನಾಗರಾಜು ಮಧ್ಯವತಿರ್ಗಳಾಗಿದ್ದಾರೆ. ಕರೊನಾ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದ ಜನರಿಗೆ ನೆಗೆಟಿವ್ ವರದಿ ನೀಡುವುದಾಗಿ ಹೇಳಿ ಆರೋಗ್ಯ ಕೇಂದ್ರ ಸಿಬ್ಬಂದಿ ಪರವಾಗಿ ಹಣ ವಸೂಲಿ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಆರೋಗ್ಯ ಕೇಂದ್ರದ ಇಬ್ಬರು ನೌಕರರು ಸಹ ಸಾಥ್ ನೀಡಿವ ಮಾಹಿತಿ ಲಭ್ಯವಾಗಿದೆ. ಅವರನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾಗೆ ಮತ್ತಿಬ್ಬರು ಪತ್ರಕರ್ತರು ಬಲಿ: ಸೋಂಕಿತರಾಗಿದ್ದ ರೋಹಿತ್ ಸರ್ದಾನ, ನೀಲಾಕ್ಷಿ ಭಟ್ಟಾಚಾರ್ಯ ನಿಧನ