ಗಂಗೊಳ್ಳಿ: ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದುಕೊಂಡಿದ್ದ ಗುಜ್ಜಾಡಿ ಗ್ರಾಮದ ನಾಯಕವಾಡಿ ಹೊಸಮನೆ ನಿವಾಸಿ ಸಚಿನ್ (24) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಚಿನ್ ಏಪ್ರಿಲ್ನಲ್ಲಿ ಊರಿಗೆ ಬಂದು ವರ್ಕ್ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದನು. ಸಂಬಳ ಸಾಕಾಗದೆ ಬೇಸರದಲ್ಲಿ ಈತ ಕೆಲವು ಬ್ಯಾಂಕ್ಗಳಲ್ಲಿ ಹಾಗೂ ಕೆಲವರಲ್ಲಿ ಕೈ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದುಕೊಂಡಿದ್ದರು. ಸಾಲದ ಸಮಸ್ಯೆಯಿಂದ ಬೇಸರಗೊಂಡು ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್ ನೋಟ್ ಬರೆದು ಮನೆಯ ಸಮೀಪ ಗಣಪತಿ ಮೇಸ್ತ ಎಂಬುವವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೀಗೆ ಮಾಡಿದರೆ ನಿಮಗೆ ಫ್ರೀ ಐಸ್ ಕ್ರೀಂ! ಮಾಲ್ನಲ್ಲಿದೆ ಒಂದು ಹೊಸ ಆಫರ್