ಮುಂಬೈ: ಇಡೀ ದೇಶದಲ್ಲಿ 26,000 ಮಂದಿ ಕರೊನಾ ಸೋಂಕಿತರು ಇದ್ದಾರೆ. ಈ ಸಂಖ್ಯೆಯಲ್ಲಿ ಕಾಲು ಭಾಗ ಮಹಾರಾಷ್ಟ್ರದ್ದು. ಭಾರತದಲ್ಲಿ ಅತಿ ಹೆಚ್ಚು ಕರೊನಾ ಪೀಡಿತರು ಇರುವ ರಾಜ್ಯ ಮಹಾರಾಷ್ಟ್ರ. ಅಲ್ಲಿ 7,628 ಮಂದಿ ಸೋಂಕಿತರು ಇದ್ದಾರೆ. ಅದರಲ್ಲೂ ಮುಂಬೈನಲ್ಲೇ ಅತಿ ಹೆಚ್ಚು ಜನರು ಇದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಂದು ಆತಂಕಕಾರಿ ವಿಚಾರ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು ಶೇ.80ರಷ್ಟು ಕರೊನಾ ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳೇ ಇಲ್ಲ. ಇದೊಂದು ಅಚ್ಚರಿಯ ವಿಷಯ ಎಂದಿದ್ದಾರೆ.
ಏಪ್ರಿಲ್ 30ಕ್ಕೆ ಒಂದು ಸಭೆ ನಡೆಸಬೇಕು. ಅದರಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು. ನಿಧಾನವಾಗಿ ಸಹಜಸ್ಥಿತಿಗೆ ಮರಳಲು ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.
ಸದ್ಯ ಕರೊನಾ ಹೊರತು ಪಡಿಸಿದ ರೋಗಿಗಳಿ ಚಿಕಿತ್ಸೆ ನೀಡುವುದು ಅಗತ್ಯ. ಹಾಗಾಗಿ ವೈದ್ಯರೆಲ್ಲ ತಮ್ಮ ಆಸ್ಪತ್ರೆಗಳನ್ನು ತೆರೆಯಬೇಕು. ಡಯಾಲಿಸಿಸ್ ಕೇಂದ್ರಗಳು ಮರು ಆರಂಭವಾಗಬೇಕು ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ದೇಶದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್ಡೌನ್ ಇರಲಿದೆ. ಅದಾದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಒಡಿಶಾಗಳು ಲಾಕ್ಡೌನ್ ಅವಧಿಯನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.(ಏಜೆನ್ಸೀಸ್)
ಪಾದರಾಯನಪುರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪತ್ತೆಯಿಲ್ಲ..ಕರೊನಾ ಭಯದ ನಡುವೆಯೂ ಪೊಲೀಸರಿಂದ ತೀವ್ರ ಶೋಧ…